ಮಂಗಳೂರು : ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನವೆಂಬರ್ 20ರಿಂದ 24ರ ವರೆಗೆ ಆಯೋಜಿಸಲಾದ ಪ್ರೊ ಇಂಡಿಯಾ ಮಾಯ್ಥಾಯ್ ಚಾಂಪಿಯನ್ಶಿಪ್ (Pro-India MuayThai Legue) ಪಂದ್ಯಾಟದಲ್ಲಿ ಒಟ್ಟು 10 ಬಂಗಾರ, 3 ಬೆಳ್ಳಿ, 3 ಕಂಚು ಪಡೆಯುವ ಮೂಲಕ ಕರ್ನಾಟಕ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಇದೇ ವೇಳೆ ದೇಶದ 27 ರಾಜ್ಯಗಳ ಸುಮಾರು 357 ಕ್ರೀಡಾಪಟುಗಳು ಭಾಗವಹಿಸಿದ್ದ ಮಾಯಿಥಾಯ್ ರಾಷ್ಟ್ರೀಯ ಪಂದ್ಯಾಟದಲ್ಲಿ ಮಂಗಳೂರಿನ ಮಂಕಿ ಮಹಿಮ್ ಪೈಟ್ ಕ್ಲಬ್ ಹಾಗೂ ಫಿಟ್ನೆಶ್ ಸೆಂಟರಿನ ಕ್ರೀಡಾಪಟುಗಳು 8 ಚಿನ್ನ, 1 ಬೆಳ್ಲಿ, 2ಕಂಚು ಪಡೆಯುವ ಮೂಲಕ ಭಾರೀ ಯಶಸ್ಸಿನೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಮಾಯ್ಥಾಯ್ ಎಸೋಸಿಯೇಶನ್ ರಾಜ್ಯಾಧ್ಯಕ್ಷರಾದ ರಾಜಗೋಪಾಲ್ ರೈಯವರು, ಮಂಕಿ ಮಹಿಮ್ ಪೈಟ್ ಕ್ಲಬ್ ಹಾಗೂ ಫಿಟ್ನೆಶ್ ಸೆಂಟರಿನ ಕ್ರೀಡಾಪಟುಗಳು ಕೋಚ್ ನಿತೀಶ್ ಕುಮಾರ್ ಹಾಗೂ ಕ್ಲಬ್ನ ಚೆಯರ್ಮ್ಯಾನ್ ಸಚಿನ್ ರೈ ಹಾಗೂ ವ್ಯವಸ್ಥಾಪಕ ಬಿಪಿನ್ ರಾಜ್ ರೈ ಯವರ ಸತತ ಪ್ರಯತ್ನದ ಫಲವಾಗಿ ಹಾಗೂ ಕ್ರೀಡಾಳುಗಳ ಕಠಿಣ ಪರಿಶ್ರಮದಿಂದ ಇಷ್ಟೊಂದು ದೊಡ್ಡ ರೀತಿಯಲ್ಲಿ ಯಶಸ್ಸುಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಮೊಯ್ಥಾಯ್ ಯುವಕರ ಶಕ್ತಿಯನ್ನು ಪ್ರತಿನಿಧಿಸುವಂತಹ ಕ್ರೀಡೆಯಾಗಿದೆ. ದೇಶದಲ್ಲಿ ಈ ಕ್ರೀಡೆಯು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಮೊಯ್ಥಾಯ್ ಕ್ರೀಡೆ ಥೈಲ್ಯಾಂಡ್ನಲ್ಲಿ ಆರಂಭಗೊಂಡು ಭಾರತದಲ್ಲೂ ತನ್ನ ಹೆಜ್ಜೆಯನ್ನು ಮೂಡಿಸುತ್ತಿದೆ. ಭಾರತೀಯರು ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಮೊಯ್ಥಾಯ್ನತ್ತ ಆಸಕ್ತಿ ತೋರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಾಂಪಿಯನ್ಶಿಪ್ಗಳನ್ನು ಆಯೋಜಿಸಲಾಗುವುದು ಎಂದು ರಾಜಗೋಪಾಲ್ ರೈ ತಿಳಿಸಿದರು.
ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾದ ಈ ಪಂದ್ಯಾಟದಲ್ಲಿ ದೇಶದ 27 ರಾಜ್ಯಗಳ 357 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಸತತ ಐದು ದಿನ ನಡೆದ ಈ ಪಂದ್ಯಾಟದಲ್ಲಿ ಸಂಪೂರ್ಣ ನಿರ್ಣಾಯಕರು ರಾಷ್ಟ್ರೀಯ ಮೂಯಿಥಾಯಿ ಎಸೋಸಿಯೇಶನ್ನವರೇ ಆಗಿದ್ದರು. ಮಾತ್ರವಲ್ಲದೇ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೂಡ ಈ ಪಂದ್ಯಾಟಕ್ಕಾಗಿ ಮಂಗಳೂರಿನಗೆ ಆಗಮಿಸಿ ಇಲ್ಲೆ ವಾಸ್ತವ್ಯ ಹೂಡಿದ್ದರು.ಇದು ಮಂಗಳೂರಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಕ್ರೀಡಾಳುಗಳ ಎಲ್ಲಾ ವ್ಯವಸ್ಥೆಗಳನ್ನು (ಊಟ ವಸತಿ) ಮಂಕಿ ಮೆಹಮ್ ಫೈಟ್ ಕ್ಲಬಿನವರು ಅತ್ತಂತ ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದರು ಎಂದು ರಾಜಗೋಪಾಲ್ ರೈ ಅವರು ತಿಳಿಸಿದರು.
ಫೈನಲ್ ಕಾದಾಟದಲ್ಲಿ 26 ಫೈಟರ್ಗಳಿಂದ 13 Super ಫೈಟ್ :
ಫೈನಲ್ ಕಾದಾಟದಲ್ಲಿ 26 ಫೈಟರ್ ಗಳು ಪಾಲ್ಗೊಂಡಿದ್ದು, ಒಟ್ಟು 13 ಫೈಟ್ ನಡೆಯುವ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ. ಮಂಗಳೂರಿನ ಮಂಕಿ ಮೇಹೆಂ ಫೈಟ್ ಕ್ಲಬಿನ 6 ಫೈಟರ್ ಗಳು ಈ ಅಂತಿಮ ಸ್ಫರ್ದೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳಿಂದ ಉದ್ಘಾಟನೆ :
ನವೆಂಬರ್ 20ರಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್.,ಮಂಗಳೂರು ದಕ್ಷಿಣ ಶಾಸಕ ಹಾಗೂ ಕಾರ್ಯಕ್ರಮ ಸಂಘಟಕ ವೇದವ್ಯಾಸ ಕಾಮತ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉದ್ಯಮಿ ಕೆ.ಸಿ.ನ್ಯಾಕ್, ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ, ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಜಗದೀಶ್ ಅಧಿಕಾರಿ, ಸುನೀಲ್ ಆಚಾರ್, ರೂಪೇಶ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ರಾಘವೇಂದ್ರ ರಾವ್, ಸ್ವರ್ಣಸುಂದರ್, ಬಶೀರ್ ಬೈಕಂಪಾಡಿ, ಯತೀಶ್ ಬೈಕಂಪಾಡಿ, ಸಚಿನ್ ರಾಜ್ ರೈ, ಬಿಪಿನ್ ರಾಜ್, ನಿತೀಶ್ ಕುಮಾರ್, ಮಹೇಶ್ ಪಾಂಡ್ಯ, ಡಿ.ಎಂ. ಅಸ್ಲಾಂ, ಚೇತನ್, ಬಾಲಕೃಷ್ಣ ಶೆಟ್ಟಿ, ಚೇತನ್ ಅಶ್ವಥಾಮ ಮುಂತಾದವರು ಉಪಸ್ಥಿತರಿದ್ದರು.
ಸಮಾರೋಪಕ್ಕೆ ಗಣ್ಯರ ದಂಡು :
ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ಅಥಿಗಳಾಗಿ ಮೊಯ್ಥಾಯ್ ಅಸೋಸಿಯೇಶನ್ನ ಬ್ರಾಂಡ್ ಅಂಬಾಸಿಡರ್ ಬಾಲಿವುಡ್ನ ಕಿರುತೆರೆ ನಟ ಅಲಿ ಹಸನ್ ಸೇರಿದಂತೆ ಗಣ್ಯರೇ ದಂಡೆ ಆಗಮಿಸಿ ಪಂದ್ಯಾಟಕ್ಕೆ ಶುಭಾಕೋರಿದರು.
ಸಮಾರೋಪ ಸಮಾರಂಭದಲ್ಲಿ ಅಸೋಸಿಯೇಶನ್ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿ, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಕೃಷ್ಣ ಜೆ.ಪಾಲೆಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ನೇಮರಾಜ ರೈ, ಎಂಆರ್ಪಿಎಲ್ ಅಧಿಕಾರಿ ರುಡಾಲ್ಫ್ ನೊರೊನ್ಹಾ, ಒಎನ್ಜಿಸಿ ಅಧಿಕಾರಿ ವಿವೇಕ್ ಮಲ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಡಿಸಿಪಿ ಲಕ್ಷ್ಮೀ ಗಣೇಶ್, ಮಾಜಿ ಮೇಯರ್, ಕಾರ್ಪೊರೇಟರ್ ಶಶಿಧರ ಹೆಗ್ಡೆ, ಬಜರಂಗದಳದ ರಾಜ್ಯ ಸಂಚಾಲಕ ಶರಣ್ ಪಂಪ್ವೆಲ್,ಮಾಯಿಥಾಯ್ ಎಸೋಶಿಯಸ್ನ ಸಚಿನ್ ರಾಜ್ಗೋಪಾಲ್ ರೈ, ಪ್ರಮುಖರಾದ ಚಂದ್ರಹಾಸ್ ರೈ, ಬಶೀರ್ ಬೈಕಂಪಾಡಿ, ಬಾಲಕೃಷ್ಣ ಶೆಟ್ಟಿ, ರವಿಶಂಕರ್ ಮಿಜಾರ್, ಸಮಿತಿ ಸದಸ್ಯರಾದ ರಾಘವೇಂದ್ರ ಎಸ್. ಸ್ವರ್ಣಸುಂದರ್, ಡಿ.ಎಂ.ಅಸ್ಲಾಂ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನವೆಂಬರ್ 20ರಿಂದ .24ರ ವರೆಗೆ ಆಯೋಜಿಸಲಾದ ಪ್ರೊ ಇಂಡಿಯಾ ಮಾಯ್ಥಾಯ್ ಚಾಂಪಿಯನ್ಶಿಪ್ (Pro-India MuayThai Legue) ಪಂದ್ಯಾಟಕ್ಕೆನವೆಂಬರ್ 24ರಂದು ಸಂಜೆ ತೆರೆಬಿದ್ದಿತು.
ಪ್ರೊ ಇಂಡಿಯಾ ಮಾಯ್ಥಾಯ್ ಚಾಂಪಿಯನ್ಶಿಪ್ – ವಿಜೇತ ಕ್ರೀಡಾಪಟುಗಳು :
ಮಹಿಳೆಯರ ವಿಭಾಗದಲ್ಲಿ ರಾಷ್ಟ್ರೀಯ ಬೆಸ್ಟ್ ಪೈಟರ್ ಅವಾನಿ.ಎಸ್.ಕುಮಾರ್ ಮಂಕಿ ಮಹಿಮ್ ಫೈಟ್ ಕ್ಲಬ್ ಹಾಗೂ ಫಿಟ್ನೆಶ್ ಕ್ಲಬ್ನ ಸದಸ್ಯರು.
ಪುರುಷರ ವಿಭಾಗದಲ್ಲಿ ರಾಷ್ಟ್ರೀಯ ಬೆಸ್ಟ್ ಪೈಟರ್ ಜೊಫ್ ವನಲ್ಹರಿಯ (ಮಿಜೋರಮ್)
ಕರ್ನಾಟಕದಿಂದ ಭಾಗವಹಿಸಿದ ಸ್ಪರ್ಧಾಳುಗಳು ಒಟ್ಟು 33
ಮಹಿಳೆಯರು – 9
1. ಗಹನ ಪ್ರಶಾಂತ್ ನಾರಾಯಣ್ – ಕಂಚು ಪದಕ (54ಕೆಜಿ)
2.ಪ್ರಗ್ಯಾನ್ ಪ್ರಶಾಂತ್ ನಾರಾಯಣ್ – ಬೆಳ್ಳಿ ಪದಕ (57ಕೆಜಿ)
3.ದೇವಿಕ ಶೆಟ್ಟಿ (ಮಂಕಿ ಮಹಿಮ್ ಫೈಟ್ ಕ್ಲಬ್) -ಬಂಗಾರದ ಪದಕ (71-75ಕೆಜಿ)
4.ನಿರನ್ ಪೂಜಾರಿ(ಮಂಕಿ ಮಹಿಮ್ ಫೈಟ್ ಕ್ಲಬ್) – ಬಂಗಾರ ಪದಕ(45-48ಕೆಜಿ)
5.ಮೊಹಮ್ಮದ್ ಮುಸ್ತಾಫ್ (ಮಂಕಿ ಮಹಿಮ್ ಫೈಟ್ ಕ್ಲಬ್) – ಬಂಗಾರ ಪದಕ(75-81 ಕೆಜಿ)
6.ನಾಹುಶ್ ಹೆಗ್ಡೆ (ಮಂಕಿ ಮಹಿಮ್ ಫೈಟ್ ಕ್ಲಬ್) – ಬಂಗಾರ ಪದಕ ( 86-91ಕೆಜಿ)
7.ಇಬ್ರಾಹಿಂ ತೌಶಿಫ್ ( ಮಂಕಿ ಮಹಿಮ ಫೈಟ್ ಕ್ಲಬ್) – ಬಂಗಾರ ಪದಕ(60-663.೫ ಕೆಜಿ)
8. ಅವನಿ.ಎಸ್.ಕುಮಾರ್ (ಮಂಕಿ ಮಹಿಮ್ ಫೈಟ್ ಕ್ಲಬ್) – ಬಂಗಾರ ಪದಕ (45-48ಕೆಜಿ)
9.ಬ್ಲೆಸಿ ಜೋಯ್ (ಮಂಕಿ ಮಹಿಮ್ ಫೈಟ್ ಕ್ಲಬ್) – ಬೆಳ್ಳಿ ಪದಕ (48-51ಕೆಜಿ)
10.ರುತ್ ಡಿ’ಸಿಲ್ವ (ಮಂಕಿ ಮಹಿಮ್ ಫೈಟ್ ಕ್ಲಬ್) – ಬಂಗಾರ ಪದಕ (61-63ಕೆಜಿ)
11.ಶ್ರವಣ ಶೆಟ್ಟಿ (ಮಂಕಿ ಮಹಿಮ್ ಫೈಟ್ ಕ್ಲಬ್) – ಕಂಚು ಪದಕ (67-71ಕೆಜಿ)
12. ಸುರ್ಕಿತ್ (ಮಂಕಿ ಮಹಿಮ್ ಫೈಟ್ ಕ್ಲಬ್) – ಕಂಚು ಪದಕ (75-81ಕೆಜಿ)
13.ಕೃತಿ ಸಾಕ್ಷಿ (ಮಂಕಿ ಮಹಿಮ್ ಫೈಟ್ ಕ್ಲಬ್) – ಬಂಗಾರ ಪದಕ (51ಕೆಜಿ)
14 .ಹರೀಶ್ ಗೌಳಿ – ಬಂಗಾರ ಪದಕ
15.ದರ್ಶನ್ ರಾಜ್ – ಬಂಗಾರ ಪದಕ
16.ಲಿಖಿತ್ – ಬೆಳ್ಳಿ ಪದಕ
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

































Comments are closed.