ಕರಾವಳಿ

ದೇಶದಲ್ಲಿ ಕ್ರಾಂತಿಕಾರಕ ಸುಧಾರಣೆ ತಂದ‌ ಮುತ್ಸದಿ : ಜೇಟ್ಲಿ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ತೀವ್ರ ಸಂತಾಪ

Pinterest LinkedIn Tumblr

ಮಂಗಳೂರು, ಆಗಸ್ಟ್,24: ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಅದ್ವಿತೀಯ ಕೊಡುಗೆ ನೀಡಿದ ಅರುಣ್ ಜೇಟ್ಲಿ ಅವರ ಅಗಲುವಿಕೆಯಿಂದ ಬಿಜೆಪಿ ತನ್ನ ಓರ್ವ ಮಹಾನ್ ನಾಯಕನನ್ನು ಕಳಕೊಂಡಂತಾಗಿದೆ.ತುರ್ತು ಪರಿಸ್ಥಿತಿ ಕಾಲದಲ್ಲಿ ಜೈಲು ವಾಸ ಅನುಭವಿಸಿದ್ದ ಜೇಟ್ಲಿ ಅವರ ಪಕ್ಷ ನಿಷ್ಠೆ ಹಾಗೂ ದೇಶ ಪ್ರೇಮ ಸದಾ ಸ್ಮರಣೀಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಜೇಟ್ಲಿ ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಜಿಎಸ್ ಟಿ ಜಾರಿ, ಬ್ಯಾಂಕ್‌ಗಳ ಬಲವರ್ಧನೆ, ರೈಲ್ವೆ ಬಜೆಟ್ ವಿಲೀನ ಮುಂತಾದ ಕ್ರಮಗಳ ಮೂಲಕ ದೇಶದಲ್ಲಿ ಕ್ರಾಂತಿಕಾರಕ ಸುಧಾರಣೆ ತಂದ‌ ಮುತ್ಸದಿ. ಕರ್ನಾಟಕ ದ ಬಿಜೆಪಿ ಉಸ್ತುವಾರಿ ಯಾಗಿದ್ದ ಜೇಟ್ಲಿ ಅವರು ಪ್ರಥಮ ಬಾರಿಗೆ ಪಕ್ಷ ಅಧಿಕಾರ ಪಡೆಯಲು ಮಹತ್ತರ ಪಾತ್ರ ವಹಿಸಿದ್ದರು ಎಂದು ನಳಿನ್ ಕುಮಾರ್ ಸಂತಾಪದಲ್ಲಿ ಸ್ಮರಿಸಿದ್ದಾರೆ.

Comments are closed.