ಪ್ರಮುಖ ವರದಿಗಳು

ಸಾಯುವ 1 ಗಂಟೆ ಮುಂಚೆ ಹರೀಶ್ ಸಾಳ್ವೆಗೆ ಕರೆ ಮಾಡಿ ‘1 ರೂ. ಶುಲ್ಕ’ದ ಹಣ ಸ್ವೀಕರಿಸುವಂತೆ ಹೇಳಿದ್ದ ಸುಷ್ಮಾ ಸ್ವರಾಜ್ !

Pinterest LinkedIn Tumblr

ನವದೆಹಲಿ: ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾಗಿದ್ದಾಗ ಕುಲಭೂಷಣ್ ಜಾಧವ್ ಪ್ರಕರಣ ನಿರ್ವಹಿಸಿದ್ದನ್ನು ಯಾರು ತಾನೆ ಮರೆಯುವುದಕ್ಕೆ ಸಾಧ್ಯ? ವಕೀಲ ಹರೀಶ್ ಸಾಳ್ವೆಯ ಕಾರ್ಯನಿರ್ವಹಣೆಯಂತೂ ಮತ್ತಷ್ಟು ರೋಚಕ. ಈ ಪ್ರಕರಣದ ಜವಾಬ್ದಾರಿಯನ್ನು ಸುಷ್ಮಾ ಸ್ವರಾಜ್ ಅವರು ಕೊನೆಯ ಕ್ಷಣದವರೆಗೂ ಮರೆತಿರಲಿಲ್ಲ.

ಕೊನೆಯುಸಿರೆಳೆಯುವುದಕ್ಕೂ ಒಂದು ಗಂಟೆ ಮುನ್ನ ಸುಷ್ಮಾ ಸ್ವರಾಜ್ ಹರೀಶ್ ಸಾಳ್ವೆ ಅವರಿಗೆ ಕರೆ ಮಾಡಿ, ಮನೆಗೆ ಬಂದು ಒಂದು ರೂಪಾಯಿ ಶುಲ್ಕ ಸ್ವೀಕರಿಸುವಂತೆ ತಿಳಿಸಿದ್ದರು.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಸರ್ಕಾರದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುವುದಕ್ಕೆ ಹರೀಶ್ ಸಾಳ್ವೆ ಕೇವಲ ಒಂದು ರೂಪಾಯಿ ಶುಲ್ಕ ಪಡೆಯಲು ನಿರ್ಧರಿಸಿದ್ದರು.

ನಾನು 8:50 ರ ವೇಳೆಗೆ ಅವರೊಂದಿಗೆ ಮಾತನಾಡಿದ್ದೆ, ಅದು ತೀರಾ ಭಾವುಕ ಸಂಭಾಷಣೆಯಾಗಿತ್ತು. ನೀವು ಬಂದು ನನ್ನನ್ನು ಭೇಟಿ ಮಾಡಬೇಕು, ನೀವು ಗೆದ್ದ ಕೇಸ್ ಗೆ ನಾನು ನಿಮಗೆ ಒಂದು ರೂಪಾಯಿ ಶುಲ್ಕ ನೀಡಬೇಕು ಎಂದರು. ಆ ಅಮೂಲ್ಯ ಶುಲ್ಕವನ್ನು ಪಡೆಯಲು ಖಂಡಿತವಾಗಿಯೂ ಬರುತ್ತೇನೆ ಎಂದಿದ್ದನ್ನು ಸಾಳ್ವೆ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

Comments are closed.