ಕರಾವಳಿ

ಸಾಲಿಗ್ರಾಮದಲ್ಲಿ ಸಿಕ್ಕ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕರು

Pinterest LinkedIn Tumblr

ಉಡುಪಿ: ಲಕ್ಷಾಂತರ ಮೌಲ್ಯದ ಚಿನ್ನದ ಒಡೆವೆಗಳಿದ್ದ ಬ್ಯಾಗ್ ಅನ್ನು ಕಳೆದುಕೊಂಡವರಿಗೆ ಪೊಲೀಸರ ಮುಖಾಂತರ ಮರಳಿಸಿ ಆಟೋ ಚಾಲಕರಿಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಸಾಲಿಗ್ರಾಮದ ಹೋಟೆಲೊಂದರ ಬಳಿ ಒಂದು ಬ್ಯಾಗ್ ಬಿದ್ದಿದ್ದನ್ನು ಆಟೋ ಚಾಲಕರಾದ ಸಂತೋಷ್ ಮೆಂಡನ್ ಮತ್ತು ನಾರಾಯಣ ಆಚಾರ್ ಎನ್ನುವರು ನೋಡಿದ್ದು ಅದರಲ್ಲಿ ಸುಮಾರು ನಾಲ್ಕರಿಂದ ಐದು ಪವನ್ ಚಿನ್ನದ ಒಡವೆಯಿದ್ದಿದ್ದು ಕಂಡುಬಂದಿದೆ. ಬ್ಯಾಗ್ ಸಂಬಂಧಪಟ್ಟವರ ಪತ್ತೆಗಾಗಿ ಸ್ಥಳೀಯ ಸಿ.ಸಿ. ಕ್ಯಾಮರಾ ಮುಖಾಂತರ ಸಂಬಂಧ ಪಟ್ಟವರನ್ನು ಪತ್ತೆಹಚ್ಚಿ ಕೋಟ ಪೊಲೀಸ್ ಠಾಣೆ ಪಿಎಸ್ಐ ನಿತ್ಯಾನಂದ ಗೌಡ ಅವರ ಮುಖಾಂತರ ಸಂಬಂಧ ಪಟ್ಟವರಿಗೆ ಹಸ್ತಾಂತರಿಸಲಾಗಿದೆ.

ಆಟೋ ಚಾಲಕರ ಈ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Comments are closed.