ಕರಾವಳಿ

ಸುನ್ನಿ ಸೆಂಟರ್ ಯು.ಎ.ಇ ಯೂಥ್ ವಿಂಗ್‌ನ 20ನೇ ವಾರ್ಷಿಕೋತ್ಸವ : ದುಬೈಯಲ್ಲಿ ಬೃಹತ್ ರಕ್ತದಾನ ಶಿಬಿರ

Pinterest LinkedIn Tumblr

ದುಬೈ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಯೂಥ್ ವಿಂಗ್ ಇದರ 20ನೇ ವಾರ್ಷಿಕೋತ್ಸವದ ಪ್ರಚಾರಾರ್ಥವಾಗಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಲತೀಫಾ ಆಸ್ಪತ್ರೆ ಹೂದ್ ಮೆಹ್ತಾದಲ್ಲಿ ಶುಕ್ರವಾರ ನಡೆಯಿತು.

ರಕ್ತದಾನ ಶಿಬಿರದ ಉದ್ಘಾಟನೆ ಹಾಗು 20ನೇ ವಾರ್ಷಿಕ ಸಮ್ಮೇಳನದ ಪ್ರಚಾರ ಸಭೆಯು ಯೂಥ್ ವಿಂಗ್ ಅಧ್ಯಕ್ಷರಾದ ಸಮದ್ ಬಿರಾಳಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅವರು ಮಾತನಾಡುತ್ತಾ  ರಕ್ತದಾನ ಶಿಬಿರ ಯಶಸ್ವಿ ಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ,ಅದೇ ರೀತಿ ಶಿಬಿರ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡಕ್ಕೆ ವಿಶೇಷವಾಗಿ ಧನ್ಯವಾದ ಸಲ್ಲಿಸಿದರು.

20ನೇ ವಾರ್ಷಿಕ ಕಾರ್ಯಕ್ರಮದ ಸ್ವಾಗತ ಸಮಿತಿ ಸಂಚಾಲಕರಾದ ಜನಾಬ್ ಬದ್ರುದ್ದೀನ್ ಹೆಂತಾರ್ ದುಅ: ಮೂಲಕ ಸಭೆಗೆ ಚಾಲನೆ ನೀಡಿದರು. ಡಿ.ಕೆ.ಎಸ್.ಸಿ ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ನವಾಝ್ ಕೋಟೆಕ್ಕಾರ್ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರಿಯ ಸಮಿತಿ ಅಧ್ಯಕ್ಷರಾದ ಹಾಜಿ ಇಕ್ಬಾಲ್ ಕನ್ನಂಗಾರ್, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ 20ನೇ ವಾರ್ಷಿಕ ಸಮ್ಮೇಳನದ ಪ್ರಚಾರವನ್ನು ರಕ್ತದಾನದ ಮೂಲಕ ಪ್ರಾರಂಬಿಸಲಾಗಿದೆ ಎಂದು ತಿಳಿಸಿದರು.

ಬ್ಲಡ್ ಡೋನರ್ಸ್ ಮಂಗಳೂರು(ರಿ )ಯು.ಎ.ಇ ಇದರ ಕಾರ್ಯ ನಿರ್ವಾಹಕ ಜನಾಬ್ ಶಂಸುದ್ದೀನ್ ಪಿಲಿಗೂಡು ಪ್ರಾಸ್ತಾವಿಕವಾಗಿ ಮಾತನಾಡುತ್ತ ಬ್ಲಡ್ ಡೋನರ್ಸ್ ಮಂಗಳೂರು(ರಿ)ತಂಡ ನಡೆಸಿ ಕೊಂಡು ಬರುತ್ತಿರುವ ರಕ್ತದಾನ ಶಿಬಿರದ ಬಗ್ಗೆ ವಿವರಿಸಿದರು ಹಾಗು ಡಿ.ಕೆ.ಎಸ್.ಸಿ 20 ನೇ ವಾರ್ಷಿಕ ಸಮ್ಮೇಳನ ಹಾಗು ಇತರ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನಿಡುವುದಾಗಿ ತಿಳಿಸಿದರು.

ಅಲ್ ಇಹ್ಸಾನ್ ವುಮೆನ್ಸ್ ಕಾಲೇಜು ಛೇರ್ಮನ್ ಜನಾಬ್, ಮುಹಮ್ಮದ್ ಇಬ್ರಾಹಿಂ ಮೂಳೂರು ಮಾತನಾಡುತ್ತ ಡಿ.ಕೆ.ಎಸ್.ಸಿ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಇಹ್ಸಾನ್ ವಿದ್ಯಾ ಸಂಸ್ಥೆಗಳ ಬಗ್ಗೆ ವಿವರಿಸಿ ಡಿ.ಕೆ.ಎಸ್.ಸಿ ಸಂಘಟನೆ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಮಹತ್ವವನ್ನು ಸವಿವರವಾಗಿ ವಿವರಿಸಿದರು.

20 ನೇ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ಛೇರ್ಮನ್ ಜನಾಬ್| ಮುಹಮ್ಮದ್ ಶಕೂರ್ ಮನಿಲಾ ಮಾತನಾಡಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕಾಗಿ ವಿನಂತಿಸಿದರು , ರಾಷ್ಟ್ರಿಯ ಸಮಿತಿಯ ಹಿರಿಯ ನಾಯಕರಾದ ಜನಾಬ್ ಅಬ್ದುಲ್ ಲತೀಫ್ ಮುಲ್ಕಿ ಹಾಗು ಜನಾಬ್ ಯುಸೂಫ್ ಅರ್ಲಪದವು ಶುಭ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿ.ಕೆ.ಎಸ್.ಸಿ ರಾಷ್ಟ್ರಿಯ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ, ಬ್ಲಡ್ ಡೋನರ್ಸ್ ಮಂಗಳೂರು (ರಿ )ಯು.ಎ.ಇ ಇದರ ಕಾರ್ಯ ನಿರ್ವಾಹಕ ಜನಾಬ್: ನಝೀರ್ ಬಿಕರ್ನಕಟ್ಟೆ ,ಯುವ ಉದ್ಯಮಿ ಇಷಾಮ್ ಅರ್ಷದ್, ಡಿ.ಕೆ.ಎಸ್.ಸಿ ಪ್ರಮುಖರಾದ ಜನಾಬ್ ಹಸನಬ್ಬ ಕೊಳ್ನಾಡ್, ಅಬ್ದುಲ್ಲಾ ಬೀಜಾಡಿ , ಅಬ್ದುಲ್ ರಹಿಮಾನ್ ಸಜಿಪ , ಅಬ್ದುಲ್ಲಾ ಪೆರುವಾಯಿ , ಹಸನಬ್ಬ ಹಳೆಯಂಗಡಿ , ಸಮೀರ್ ಇಬ್ರಾಹಿಂ ಕಲ್ಲಾರೆ , ಇಬ್ರಾಹಿಂ ಕಳತ್ತೂರ್ , ಕಮರುದ್ದೀನ್ ಗುರುಪುರ ಮೊದಲಾದವರು ಉಪಸ್ಥಿತರಿದ್ದರು.

ಯೂಥ್ ವಿಂಗ್ ಸದಸ್ಯರಾದ ಜಮಾಲ್ ಬಜ್ಪೆ , ರಿಯಾಝ್ ಕಿನ್ಯ ,ಆಫೀಲ್ ಬಿ.ಕೆ, ಸಫ್ವಾನ್ ಕರಾವಳಿ, ಅರ್ಶದ್ ಅರ್ಕುಳ ಮೊದಲಾದವರು ಕಾರ್ಯಕ್ರಮದ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು 63 ಯೂನಿಟ್ ರಕ್ತ ಸಂಗ್ರಹಿಸಲಾಯಿತು.ಯೂಥ್ ವಿಂಗ್ ಪ್ರಧಾನ ಕಾರ್ಯದರ್ಶಿ ಕಮಾಲ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ: ಬ್ಲಡ್ ಡೋನರ್ಸ್ ಮಂಗಳೂರು(ರಿ) ಮಾಧ್ಯಮ ವಿಭಾಗ  

Comments are closed.