ಕರಾವಳಿ

ನಳಿನ್ ಕುಮಾರ್ ಪುನರಾಯ್ಕೆ ; ಪೊಳಲಿ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ತೆರಳಿ ಹರಕೆ ಈಡೇರಿಸಿದ ಕಾರ್ಯಕರ್ತರು

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಮತ್ತೊಮ್ಮೆ ಸಂಸದರಾಗಿ ಪುನರಾಯ್ಕೆಗೊಂಡು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಪೂರ್ಣ ಬಹುಮತ ದೊರೆತರೆ ಮಂಗಳೂರಿನಿಂದ ಪೊಳಲಿ ದೇವಸ್ಥಾನಕ್ಕೆ ಪಾದಯಾತ್ರೆ ಮಾಡುವುದಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 47ನೇ ಮಿಲಾಗ್ರೀಸ್ ವಾರ್ಡ್ ನ ಬಿಜೆಪಿ ಕಾರ್ಯಕರ್ತರು ಸಂಕಲ್ಪ ಮಾಡಿದ್ದು, ರವಿವಾರ ಆ ಹರಕೆಯನ್ನು ಮಂಗಳೂರಿನ ಅತ್ತಾವರ ಕಟ್ಟೆಯಿಂದ ಪೊಳಲಿ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುವ ಮೂಲಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ , ಮಿಲಾಗ್ರಿಸ್ ವಾರ್ಡ್‌ ಅಧ್ಯಕ್ಷರಾದ ಮೋಹನ್ ಕೆ.ಪೂಜಾರಿ, ಕಾರ್ಯದರ್ಶಿಗಳಾದ ಡೊನಾಲ್ಡ್ ಜೀವನ್, ಪಶ್ಚಿಮ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿಗಳಾದ ಲಲೇಶ್ ಕುಮಾರ್, ಮಾಜಿ ಮ.ನ.ಪ ಸದಸ್ಯ ರಂಗನಾಥ ಕಿಣಿ, ವಾರ್ಡ್‌ ಪ್ರಮುಖರಾದ ಎಂ.ಬಿ.ರಾಜ, ಅಶೋಕ್ ಕುಮಾರ್, ಘನಶ್ಯಾಮ್, ವಿನೋದ್, ಶರತ್, ಲೋಹಿತ್, ಸುಧೀರ್, ಮಂಜುನಾಥ್ ಎಚ್, ಹೇಮಚಂದ್ರ, ಸತೀಶ್ , ಸೌಮಿತ್ , ಗಿರೀಶ್, ಕಾಶೀನಾಥ್, ಸೂರಾಜ್, ವಿಜಯ್ ಕುಮಾರ್, ಸುಹಾನ್, ಶಬರೀಶ್, ಹರೀಶ್ ರಾವ್, ಸಂಧ್ಯಾಮೋಹನ್, ಶೈಲಾ, ಭುವನ್, ಶಿವರಾಂ ವಗ್ಗ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.