ಕರಾವಳಿ

ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವರಿಗೆ ನೂತನ ಬಂಡಿ ವಾಹನ ಸಮರ್ಪಣೆ

Pinterest LinkedIn Tumblr

ಮಂಗಳೂರು : ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವರಿಗೆ ನೂತನ ಬಂಡಿ ವಾಹನ ಸಮರ್ಪಣಾ ಸಮಾರಂಭವು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಶುಭ ಆಶೀರ್ವಾದದೊಂದಿಗೆ ಶ್ರೀ ಕಾಶೀ ಮಠಾಧೀಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ತಾರೀಕು ಮೇ 13ರ ಬೆಳಗ್ಗೆ(ಸೋಮವಾರ) 7.10ರ ಶುಭ ಮುಹೂರ್ತದಲ್ಲಿ ಜರುಗಲಿರುವುದು.

ನೂತನ ಬಂಡಿ ವಾಹನವನ್ನು ಗುರುಪುರ ಪೇಟೆ ಶೆಣೈ ಕುಟುಂಬದ ಪರವಾಗಿ ಗುರುಪುರ ಅರವಿಂದ ರಾವ್ ಮತ್ತು ಕುಟುಂಬ ಮುಂಬಯಿ ,ಗುರುಪುರ ಲಕ್ಮ್ಷೀ ದೇವಿ ಮತ್ತು ಗುರುಪುರ ಗುಂಡ ಯಾನೆ ದಾಮೋದರ ಶೆಣೈ ಮಂಗಳೂರು ಇವರ ಸ್ಮರಣಾರ್ಥ ಶ್ರೀಮತಿ ಗುರುಪುರ ಲತಿಕಾ ಶೆಣೈ ಮತ್ತು ಸಿ.ಎ ಗುರುಪುರ ಹರಿರಾಮ ಶೆಣೈ ಮಂಗಳೂರು, ಶ್ರೀಮತಿ ಗುರುಪುರ ನೀನಾ ಶೆಣೈ ಮತ್ತು ಶ್ರೀ ಜಿ.ಜಿ ಗುರುಪುರ ಹರಿರಾಮ ಶೆಣೈ ಬೆಂಗಳೂರು ಇವರು ಸೇವಾರೂಪದಲ್ಲಿ ಸಮರ್ಪಿಸಲ್ಲಿದ್ದಾರೆ.

ರಥ ಶಿಲ್ಪಿ ಕೋಟೇಶ್ವರದ ಅಂಬಿಕ ವುಡ್ ಮತ್ತು ಮೆಟಲ್ ಕ್ರಾಫ್ಟ್ನ ಶ್ರೀ ರಾಜ ಗೋಪಾಲ ಆಚಾರ್ಯ ಇವರು ಕಾಮಗಾರಿಕೆಯನ್ನು ಮಾಡಿರುತ್ತಾರೆ.

Comments are closed.