ಕರಾವಳಿ

ಕರಾವಳಿಗೆ ಬಂದ ಸಿಎಂ ಎಚ್ಡಿಕೆ ಬಳಿ ಕೋಟ ಶ್ರೀನಿವಾಸ ಪೂಜಾರಿ 30 ನಿಮಿಷ ಸಮಯ ಕೇಳಿದ್ಯಾಕೆ?

Pinterest LinkedIn Tumblr

ಉಡುಪಿ: ರಾಜ್ಯದ ಮುಖ್ಯಮಂತ್ರಿಗಳ ಆರೋಗ್ಯದ ಬಗ್ಗೆ ನಮಗೂ ಕಾಳಜಿಯಿದೆ. ಜಿಲ್ಲೆಗೆ ಬಂದಿರುವ ಸಿಎಂ ನಮಗೆ ಅರ್ಧ ಗಂಟೆ ಸಮಯ ಕೊಟ್ಟರೆ ಮರಳು ಸಮಸ್ಯೆ ಬಗ್ಗೆ ಚರ್ಚೆ ಮಾಡಬಹುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಮೂಲಕ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿಯವರ ಆರೋಗ್ಯ ನಮಗೆ ಅತೀ ಮುಖ್ಯ. ಅದರೊಂದಿಗೆ ಉಡುಪಿ ಜಿಲ್ಲೆಯ ಮರಳಿನ ಸಮಸ್ಯೆ ಪರಿಹಾರಕ್ಕಾಗಿ ನಮಗೆ 30 ನಿಮಿಷ ಸಮಯ ಕೊಡಿ. ಕರಾವಳಿಯ ಪ್ರಕೃತಿಯಿಂದ ಸಿಎಂ ಆರೋಗ್ಯ ವ್ರದ್ಧಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

ಹಲವು ಸಮಯಗಳಿಂದ ಮರಳು ಸಮಸ್ಯೆಯಿಂದ ಜಿಲ್ಲೆಯಲ್ಲಿ ಕಾರ್ಮಿಕರೋಪಾದಿಯಲ್ಲಿ ಬಡ ಕೂಲಿಕಾರ್ಮಿಕ ಜನ, ಮದ್ಯಮ ವರ್ಗದ ಮಂದಿ ಪರಿತಪಿಸುತ್ತಿದ್ದರೂ ಕೂಡ ಸರಕಾರ ಮಾತ್ರ ಈ ತನಕ ಯಾವುದೇ ಮಹತ್ವದ ನಿರ್ಣಯ ಕೈಗೊಂಡಿಲ್ಲ. ಸರಕಾರ ಅಸ್ಥಿತ್ವಕ್ಕೆ ಬಂದು ವರ್ಷಗಳೇ ಕಳೆದರೂ ಮರಳು ಸಮಸ್ಯೆ ನಿವಾರಣೆಯಾಗದ ಬಗ್ಗೆ ಅಸಮಧಾನ ವ್ಯಕ್ತವಾಗಿದೆ.

Comments are closed.