ಕರಾವಳಿ

ಪುಲ್ವಾಮಾ ಸಂತೃಸ್ತ ಕುಟುಂಬಕ್ಕೆ ದ.ಕ. ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಶನ್‌ನಿಂದ ದೇಣಿಗೆ ಹಸ್ತಾಂತರ

Pinterest LinkedIn Tumblr

ಮಂಗಳೂರು : ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿ‌ಆರ್‌ಪಿ‌ಎಫ್ ಜಾವಾನ್‌ರ ಕುಟುಂಬದವರ ಕಲ್ಯಾಣಕ್ಕಾಗಿ ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಶನ್ ರೂ.50,000 ದೇಣಿಗೆ ನೀಡಿದೆ.

ಸಂಘದ ಖಜಾಂಚಿ ಮಾರೂರ್ ಶಶಿಧರ್ ಪೈ ಅವರು ಕಾರ್ಯದರ್ಶಿ ಕೆ. ವಿಲಾಸ್ ಕುಮಾರ್ ಅವರಿಗೆ ದೇಣಿಗೆ ಚೆಕ್ಕನ್ನು ದೆಹಲಿಯ ಸಿ‌ಆರ್‌ಪಿ‌ಎಫ್ ಪ್ರಧಾನ ಕಚೇರಿಗೆ ರವಾನಿಸಲು ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷ ಕಸ್ತೂರಿ ಪ್ರಭಾಕರ್ ಪೈ, ಪೋಷಕರಾದ ಕೆ.ಜಿ. ಶೆಣೈ, ಉಪಾಧ್ಯಕ್ಷ ಹರ್ಷ ಕುಮಾರ್ ಮತ್ತು ಸಂಘದ ಸಮಾಜ ಸೇವೆ ಉಪ ಸಮಿತಿಯ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣ ನಾಯಕ್ ಉಪಸ್ಥಿತರಿದ್ದರು.

ಈ ಮೊತ್ತದಲ್ಲಿ ಸಂಘದ ವೈಯಕ್ತಿಕ ಸದಸ್ಯರು ಮಾಡಿದ ಸ್ವಯಂಪ್ರೇರಿತ ಕೊಡುಗೆಗಳೊಂದಿಗೆ ಸಂಘದ ಸಾಮಾನ್ಯ ನಿಧಿಯಿಂದ ಮಾಡಲ್ಪಟ್ಟ ಕೊಡುಗೆ ಸೇರಿದೆ.

Comments are closed.