ಕರಾವಳಿ

ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ನಿಧನಕ್ಕೆ ಸಂಸದ ನಳಿನ್ ಕುಮಾರ್ ತೀವ್ರ ಸಂತಾಪ

Pinterest LinkedIn Tumblr

ಮಂಗಳೂರು, ಮಾರ್ಚ್ .17: ಗೋವಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ (ಅನಾರೋಗ್ಯದಿಂದ ಬಳಲುತ್ತಿದ್ದ) ಮನೋಹರ ಪರಿಕ್ಕರ್ ನಿಧನಕ್ಕೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್

ಕೇಂದ್ರದ ರಕ್ಷಣಾ ಸಚಿವರಾಗಿ, ಗೋವಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಗೋವಾದ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ದೇಶ ಕಂಡ ಆದರ್ಶ ನಾಯಕ. ಅವರ ಅಗಲಿಕೆಯಿಂದ ದೇಶಕ್ಕೆ ಅಪಾರ ನಷ್ಟವಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದರೂ ಅದನ್ನು ಲೆಕ್ಕಿಸದೆ ಜೀವನದ ಕೊನೆ ಉಸಿರಿನ ಜನಸೇವೆ ಮಾಡಿದ ಪರಿಕ್ಕರ್ ಅವರನ್ನು ದೇಶದ ಜನತೆ ಎಂದೂ ಮರೆಯುವಂತಿಲ್ಲ. ಅವರ ಹೋರಾಟ, ಜನಸೇವೆ, ದೇಶಪ್ರೇಮ ಸದಾ ನಮಗೆ ಪ್ರೇರಣೆಯಾಗಿರುತ್ತದೆ ಎಂದು ಸಂಸದರು ಸಂತಾಪದಲ್ಲಿ ತಿಳಿಸಿದ್ದಾರೆ.

Comments are closed.