ಕರಾವಳಿ

ಜೈಲಿಗೆ ಹೋಗೋದು ಬಿಜೆಪಿಗರಿಗೆ ಹೆಮ್ಮೆ ವಿಚಾರ, ಹಿಂದೆ ಬಿಜೆಪಿ ಸರ್ಕಾರ ಜೈಲಿನ ಕೊಠಡಿ ಅಭಿವೃದ್ದಿಪಡಿಸಿದೆ : ಜಮೀರ್ ಲೇವಡಿ

Pinterest LinkedIn Tumblr

ಉಡುಪಿ: ಎಲ್ಲರೂ ರಾತ್ರಿ ಕನಸು ಕಂಡರೆ ಯಡಿಯೂರಪ್ಪನವರು ಹಗಲಲ್ಲಿ ಕನಸು ಕಾಣುತ್ತಿದ್ದಾರೆ. ಅವರು ಎರಡುವರೆ ದಿನ ಮುಖ್ಯಮಂತ್ರಿಯಾಗಿ ಕೆಳಗಿಳಿದ ಮೇಲೆ ನಾಳೆ ತಾನು ಮುಖ್ಯಮಂತ್ರಿಯಾಗುತ್ತೇನೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರು ತಿಪ್ಪರಲಾಗ ಹಾಕಿದರೂ ಮೈತ್ರಿ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಈ ಸರ್ಕಾರ ಸುಭದ್ರವಾಗಿ ಐದು ವರ್ಷ ಆಡಳಿತ ನಡೆಸುತ್ತದೆ ಎಂದರು.

ಉಡುಪಿಯಲ್ಲಿ ಮತನಾಡಿದ ಅವರು ಕುಮಾರಸ್ವಾಮಿಯವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ. ಸಂಪುಟ ವಿಸ್ತರಣೆ ಹೈಕಮಾಂಡಿಗೆ ಬಿಟ್ಟ ವಿಚಾರವಾಗಿದ್ದು, ಕಾಂಗ್ರೆಸ್ ಪಕ್ಷ ಹೈಕಮಾಡ್ ಪಕ್ಷ ಎಂದಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರ ಜೈಲಿನ ಕೊಠಡಿಗಳನ್ನು ಅಭಿವೃದ್ದಿಪಡಿಸಿದೆ: ಜಮೀರ್ ಲೇವಡಿ
ಬಿಜೆಪಿ ಸರ್ಕಾರ ಖಂಡಿತವಾಗಿಯೂ ಅಭಿವೃದ್ದಿ ಮಾಡಿದೆ. ಆದರೆ ಅವರು ಜೈಲಿನ ಕೊಠಡಿಗಳನ್ನು ಮಾತ್ರ ಅಭಿವೃದ್ದಿಪಡಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಜೈಲಿಗೆ ಹೋಗಿದ್ದಾರೆ. ಆ ಬಳಿಕ ಅವರು ತನ್ನ ಹಿಂದೆ ಮತ್ತೂ ಇಪ್ಪತ್ತು ಮಂದಿ ಬರುತ್ತಾರೆಂದು ಜೈಲಿನ ಕೊಠಡಿಗಳನ್ನು ಅಭಿವೃದ್ದಿಪಡಿಸಿದ್ದಾರೆ. ಬಿಜೆಪಿಯವರಿಗೆ ಜೈಲಿಗೆ ಹೋಗಿ ಬಂದರೆ ಒಂದು ರೀತಿಯ ಹೆಮ್ಮೆಯ ವಿಚಾರ ಎಂದು ಸಚಿವ ಜಮೀರ್ ಅಹಮದ್ ಯಡಿಯೂರಪ್ಪನವರನ್ನು, ಬಿಜೆಪಿ ಮುಖಂಡರನ್ನು ಲೇವಡಿಯಾಡಿದರು.

Comments are closed.