ಕರಾವಳಿ

ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕರಿ ಪತಾಕೆ ಪ್ರದರ್ಶನ : ಫ್ರಾಂಕ್ಲಿನ್ ಮೋಂತೆರೊ ಬಂಧನ

Pinterest LinkedIn Tumblr

ಮಂಗಳೂರು, ನವೆಂಬರ್. 10: ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಕರಿ ಪತಾಕೆ ಪ್ರದರ್ಶಿಸಿದ ವ್ಯಕ್ತಿಯೋರ್ವನನ್ನು ಉರ್ವ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಿಜೆಪಿ ಮುಖಂಡ ಫ್ರಾಂಕ್ಲಿನ್ ಮೋಂತೆರೊ ಬಂಧಿತ ವ್ಯಕ್ತಿ. ಟಿಪ್ಪುಗೆ ಧಿಕ್ಕಾರ, ಸಿದ್ದರಾಮಯ್ಯರಿಗೆ ಧಿಕ್ಕಾರ ಹಾಗು ಗೃಹಸಚಿವರಿಗೆ ಧಿಕ್ಕಾರ ಕೂಗಿ, ಕರಿ ಪತಾಕೆ ಪ್ರದರ್ಶಿಸಿದ ಸಂದರ್ಭ ಇವರನ್ನು ಬಂಧಿಸಲಾಗಿದೆ.

ದ.ಕ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ನಡೆಯುತ್ತಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರಿ ಪತಾಕೆಯೊಂದಿಗೆ ಮುತ್ತಿಗೆ ಹಾಕಲು ಯತ್ನಿಸಿದ ಆರೋಪದಲ್ಲಿ ಫ್ರಾಂಕ್ಲಿನ್ ಮೋಂತೆರೊ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.