ಕರಾವಳಿ

ಮೂಡುಬಿದ್ರೆ : ಗಂಟಾಲ್‌ಕಟ್ಟೆ ಇಂಮ್ತಿಯಾಜ್‌ ಕೊಲೆಯತ್ನ ಪ್ರಕರಣ – ಮೂವರ ಬಂಧನ

Pinterest LinkedIn Tumblr

ಮಂಗಳೂರು, ಅಕ್ಟೋಬರ್.03: ಮೂಡುಬಿದ್ರೆ ಸಮೀಪದ ಗಂಟಾಲ್‌ಕಟ್ಟೆಯಲ್ಲಿ ಇತ್ತೀಚಿಗೆ ಇಂಮ್ತಿಯಾಜ್‌ ಎಂಬವರ ಮೇಲೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೋಡಿಕೆರೆ ಎಂ.ಎಸ್.ಇ.ಜೆಡ್ ಕಾಲೋನಿ ನಿವಾಸಿ ಧನರಾಜ್ ಯಾನೆ ಧನು (25), ಸುರತ್ಕಲ್ ಮುಕ್ಕ ಸಮೀಪದ ಸಸಿಹಿತ್ಲು ನಿವಾಸಿ ದಿನೇಶ ಪೂಜಾರಿ(:38) ಹಾಗೂ ಕುಳಾಯಿ ಹೊನ್ನೆಕಟ್ಟೆ ನಿವಾಸಿ ಶಾಶ್ವತ್ ಶೆಟ್ಟಿ ಯಾನೆ ಶಾಶ್ವತ್ (23 ) ಬಂಧಿತ ಆರೋಪಿಗಳು.

ದಿನಾಂಕ 24-09-2018 ರಂದು ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆಯ ಬದ್ರಿಯಾ ಹೋಟೆಲ್‌‌ನ ಮಾಲಿಕನಾದ ಇಂಮ್ತಿಯಾಜ್‌ ಎಂಬಾತನು ಹೋಟೆಲಿನಲ್ಲಿ ಇರುವ ಸಮಯ ಬೆಳಿಗ್ಗೆ ಜಾವ ಅಪರಿಚಿತರ ತಂಡ ಹೋಟೆಲ್‌‌ನ ಒಳಗೆ ಬಂದು ಮಾರಕಾಯುಧಗಳಿಂದ ಇಂತಿಯಾಜ್ ರವರಿಗೆ ಹಲ್ಲೆ ನಡೆಸಿದ್ದು, ಈ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಕ್ಕೆ ಮೂರು ತಂಡಗಳನ್ನು ರಚಿಸಿದ್ದು ಇದರಲ್ಲಿ ಮೂಡುಬಿದ್ರೆ ಪೊಲೀಸರು, ಮಂಗಳೂರು ಸಿಸಿಬಿ ಮತ್ತು ಮಂಗಳೂರು ನಗರ ಉತ್ತರ ಉಪವಿಭಾಗ ಪಣಂಬೂರು ರೌಡಿ ನಿಗ್ರಹ ದಳದವರು ಆರೋಪಿಗಳ ಪತ್ತೆಗೆ ಶ್ರಮಿಸಿರುತ್ತಾರೆ.

ಪ್ರಕರಣದಲ್ಲಿ ಇನ್ನು ಕೆಲವರು ಪಾಲ್ಗೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿ ಧನರಾಜ್ @ ಧನು ಎಂಬಾತನ ವಿರುದ್ದ ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲಿಸ್ ಠಾಣೆಯಲ್ಲೆ ಕೊಲೆಯತ್ನ ಪ್ರಕರಣ ಮತ್ತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವಾಟ್ಸ್ಅಪ್ ನಲ್ಲಿ ಅವಹೇಳಕಾರಿ ಪೋಸ್ಟ್ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಹಾಗೂ ಆರೋಪಿ ದಿನೇಶ ಪೂಜಾರಿ @ ದಿನ್ನು ವಿರುದ್ದ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿರುತ್ತದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್‌ ರವರ ಆದೇಶದಂತೆ ಉಪಪೊಲೀಸ್‌ ಆಯುಕ್ತರಾದ ಶ್ರೀಮತಿ ಉಮಾ ಪ್ರಶಾಂತ ರವರ ನಿರ್ದೇಶನದಂತೆ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ.ಎಸ್‌‌., ರವರ ಮಾರ್ಗದರ್ಶನದಂತೆ ಪಣಂಬೂರು ರೌಡಿ ನಿಗ್ರಹದಳದ ಪೊಲೀಸ್‌ ನಿರೀಕ್ಷಕರಾದ ರಫೀಕ್‌ ಮತ್ತು ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರಿಕ್ಷಕರಾದ ಅನಂತ ಪದ್ಮನಾಭ, ಹಾಗೂ ಸಿಬ್ಬಂದಿಯವರು, ಸಿಸಿಬಿ ಘಟಕದ ಪೊಲಿಸ್ ನಿರೀಕ್ಷಕರಾದ ಶಾಂತರಾಮ, ಅವರ ಸಿಬ್ಬಂದಿಗಳು ಹಾಗೂ ಮೂಡಬಿದರೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ಕೆ ನಾಯಕ್‌ ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ ಸಿಬ್ಬಂಧಿಗಳಾದ ಎ.ಎಸ್.ಐ. ಮೊಹಮ್ಮದ್, ಕುಶಲ ಮಣಿಯಾಣಿ , ಸತೀಶ್ ಎಂ. ವಿಜಯ ಕಾಂಚನ್, ಇಸಾಕ್ ಅಹಮ್ಮದ್. ರಾಧಾಕೃಷ್ಣ , ಶರಣ್ ಕಾಳಿ, ಶ್ಯೆಲೇಂದ್ರ ಇವರುಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

Comments are closed.