ಕುಂದಾಪುರ: ತಾಲೂಕಿನ ಆಲೂರು ವ್ಯಾಪ್ತಿಯ ಹಳ್ಳಿ ಎಂಬಲ್ಲಿ ಚಿರತೆಯೊಂದು ಮಹಿಳೆಯೋರ್ವರ ಮೇಲೆ ದಾಳಿ ನಡೆಸಿದ್ದು ಕೈ ಭಾಗಕ್ಕೆ ಗಂಭೀರ ಗಾಯವಾದ ಘಟನೆ ಶನಿವಾರ ನಡೆದಿದೆ.
ಹಾಡಿಮನೆ ನಿವಾಸಿ ಶಾಂತ ಶೆಟ್ಟಿ (50) ಎಂಬವರಿಗೆ ಗಾಯವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ.
ಶಾಂತಾ ಶೆಟ್ಟಿಯವರು ತಮ್ಮ ಮನೆಯಲ್ಲಿದ್ದ ಪುಟ್ಟ ಕರುವನ್ನು ಮೇಯಿಸಲು ಹೋದ ವೇಳೆಯಲ್ಲಿ ಚಿರತೆ ಕರುವನ್ನು ಹೊತ್ತೊಯ್ಯಲು ಮುಂದದಾದ ಅಲ್ಲಿಯೇ ಇದ್ದ ಶಾಂತಾ ಶೆಟ್ಟಿಯವರ ಮೇಲೆಯೂ ದಾಳಿ ನಡೆಸಿದೆ. ಅದ್ರಷ್ಟವಶಾತ್ ಕೈ ಭಾಗಕ್ಕೆ ಗಾಯವಾಗಿದ್ದು ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಾಂತ ಶೆಟ್ಟಿ ಮನೆಗೆ ಮರಳಿದ್ದಾರೆ.
ಸ್ಥಳಕ್ಕೆ ಆಲೂರು ವಲಯ ಅರಣ್ಯಾಧಿಕಾರಿ ದಿಲೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆ ಸೆರೆಗೆ ಬೋನ್ ಇಡಲಾಗಿದೆ. ಕುಂದಾಪುರ ತಾಲೂಕಿನ ಹಲವೆಡೆ ಚಿರತೆ ಕಾಟ ಜಾಸ್ಥಿಯಾಗಿದ್ದು ಪರಿಸರದಲ್ಲಿ ಆತಂಕ ಮನೆಮಾಡಿದೆ.
ಇದನ್ನೂ ಓದಿರಿ:
ತೆಕ್ಕಟ್ಟೆ ಮಾಲಾಡಿಯಲ್ಲಿ ‘ಆಪರೇಶನ್ ಚೀತಾ’ ಸಕ್ಸಸ್; ಬೋನಿಗೆ ಬಿದ್ದ ಹೆಣ್ಣು ಚಿರತೆ!
ತೆಕ್ಕಟ್ಟೆ ಮಾಲಾಡಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆಗಾಗಿ ಬೋನಿಟ್ಟು ಮೇಕೆ ಕಟ್ಟಿದ ಇಲಾಖೆ!
Comments are closed.