ಕರಾವಳಿ

‘ಸಚಿವ ಪ್ರಮೋದ್ ವಿರುದ್ಧ ನಾನೇನು ಅಪಪ್ರಚಾರ ಮಾಡಿಲ್ಲ’: ಮಾಜಿ ಶಾಸಕ ಯು.ಆರ್. ಸಭಾಪತಿ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ನಾನು ಭ್ರಷ್ಟಾಚಾರದ ಆರೋಪ ಮಾಡಿದ್ದೇನೆಂದು ವಾಟ್ಸಾಪ್ ಸಂದೇಶಗಳನ್ನು ಕಿಡಿಗೇಡಿಗಳು ಹರಿಯಬಿಟ್ಟಿದ್ದು ಇದು ರಾಜಕೀಯ ಹತಾಷೆಯ ಪರಮಾವಧಿಯಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾಗಿ ಮಾಇ ಶಾಸಕ ಯು.ಆರ್. ಸಭಾಪತಿ ಹೇಳೀದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಕೆಲವು ಕಿಡಿಗೇಡಿಗಳು ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೊದ್ ಮಧ್ವರಾಜ್ ವಿರುದ್ದ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದೇನೆ ಎಂದು ವಾಟ್ಸಪ್ ಗ್ರೂಪ್ ನಲ್ಲಿ ಸುಳ್ಳು ಸುದ್ದಿಯನ್ನು ಹರಡಿಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು. ಈ ಬಗ್ಗೆ ಉಡುಪಿ ಪೋಲಿಸ್ ಟಾಣಾ ಸೈಬರ್ ವಿಭಾಗದ ಉಪನಿರೀಕ್ಷಕ ಸೀತಾರಾಮ್ ರವರನ್ನು ಭೇಟಿಯಾಗಿ ದೂರು ಸಲ್ಲಿಸಿರುವುವೆ. ನನ್ನ ಮತ್ತು ಪ್ರಮೋದ್ ಮಧ್ವ ರಾಜ್ ಮಧ್ಯೆ ಒಡಕು ಮತ್ತು ಅಪಪ್ರಚಾರ ಮಾಡುವ ದುರುದ್ದೇಶದಿಂದ ಮಾಡಲಾಗಿರುವ ಕಿಡಿಗೇಡಿತನವನ್ನು ಸಾರ್ವತ್ರಿಕವಾಗಿ ಖಂಡಿಸಬೇಕಾಗಿದೆ ಎಂದಿದ್ದಾರೆ.

ಸಚಿವರಾಗಿ ಜನ ಪ್ರೀತಿಯನ್ನು ಗಳಿಸಿರುವ ಪ್ರಮೋದ್ ಮಧ್ವರಾಜ್ ವಿರುದ್ಧ ಯವುದೇ ಭ್ರಷ್ಟಾಚಾರ ದ ಆರೋಪಗಳಿಲ್ಲದೆ ಸರ್ವತ್ರ ಜನ ಬೆಂಬಲ ವ್ಯಕ್ತವಾಗಿರುವುದನ್ನು ಸಹಿಸಲಾಗದ ಅವರ ವಿರುದ್ದ ಸೂಕ್ತ ಅಭ್ಯರ್ಥಿಯ ಆಯ್ಕೆ ಮಾಡಲು ಚಡಪಡಿಸುತ್ತಿರುವ ಜನರು ಹತಾಷೆಯಿಂದ ಮಾಡಿರುವ ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ; ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.