ಕರಾವಳಿ

ಕುಂದಾಪುರ: ಹಡಿಲು ಭೂಮಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ: ಕೊಲೆಯೋ…ಅಸಹಜ ಸಾವೋ? ನಿಗೂಡ!

Pinterest LinkedIn Tumblr

ಕುಂದಾಪುರ: ಎಕ್ರೆಗಟ್ಟಲೇ ಗದ್ದೆ ಪ್ರದೇಶವಿದ್ದ ಹಡಿಲು ಭೂಮಿಯೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಕೊಲೆಯೋ ಅಸಹಜ ಸಾವಾಗಿರಬಹುದೇ ಎಂಬ ಅನುಮಾನಕ್ಕೀಡುಮಾಡಿದೆ. ಕುಂದಾಪುರ ತಾಲೂಕಿನ ಕೋಟೇಶ್ವರ ಆಸುಪಾಸಿನ ನೇರಂಬಳ್ಳಿ ಎಂಬಲ್ಲಿ ಗುರುವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದೆ.

ಹಲವು ಎಕ್ರೆ ಕ್ರಷಿಭೂಮಿಯಿರುವ ಪ್ರದೇಶದಲ್ಲಿ ಕುರುಚಲು ಗಿಡದಿಂದ ಆವ್ರತವಾದ ಹಡಿಲು ಭೂಮಿಯಲ್ಲಿ ಅಪರಿಚಿತ ಶವವೊಂದು ಭಾಗಶಃ ಸುಟ್ಟ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹದ ಭಾಗಗಳಳನ್ನು ಪ್ರಾಣಿಗಳು ತಿಂದಿರುವ ಶಂಕೆ ವ್ಯಕ್ತವಾಗುತ್ತಿದ್ದು ಒಂದೆರಡು ದಿನಗಳ ಹಿಂದೆ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಮೇಲ್ನೋಟಕ್ಕೆ ಪುರುಷನ ಶವ ಇದಾಗಿದ್ದು ಸುಮಾರು ೫ ಅಡಿ ಎತ್ತರ ಸಾಮಾನ್ಯ ದೇಹವುಳ್ಳವರಗಿದ್ದಾರೆ. ಸ್ಥಳದಲ್ಲಿ ಯಾವುದೇ ಗುರುತುಗಳು ಲಭಿಸಿಲ್ಲ.

ಘಟನೆ ಸಂಭವಿಸಿದ ಸ್ಥಳವು ಕಾಲು ದಾರಿಯಿಂದ ಸಾಗಬಹುದಾದ ಸ್ಥಳವಾಗಿದೆ. ಮೇಲ್ನೋಟಕ್ಕೆ ಇದೊಂದು ಅಸಹಜ ಸಾವು ಎಂಬುದಾಗಿ ಕಂಡು ಬರುತ್ತಿದ್ದರೂ ಕೂಡ ಕೊಲೆ ಮಾಡಿ ಎಸೆದು ಬೆಂಕಿ ಕೊಡಲಾಗಿದೆಯೇ ಎಂಬ ಊಹಾಪೋಹ ಸುದ್ದಿಗಳು ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್, ಪಿಎಸ್ಐ ಹರೀಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಶವವನ್ನು ಹೆಚ್ಚಿನ ತನಿಖೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

Comments are closed.