ಕರ್ನಾಟಕ

ಯಡಿಯೂರಪ್ಪ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ ಈಶ್ವರಪ್ಪ ! “ವರ್ಚಸ್ಸು ಇಲ್ಲ…ತಾಕತ್ತು ಇಲ್ಲ…”

Pinterest LinkedIn Tumblr

ತುಮಕೂರು: ನಾನು ಪಕ್ಷದ ವಿರೋಧಿ ಚಟುವಟಿಕೆಯಲ್ಲಿ ತೊಡಗಿಲ್ಲ. ಆರಂಭದಿಂದಲೂ ನಾನು ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಏಳ್ಗೆಗಾಗಿ ಶ್ರಮಿಸಿದ್ದೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ ಹೇಳಿದರು.

ನಗರದ ಹೊರವಲಯದಲ್ಲಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಭಾರತ ಮಾತಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ವರದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕುರಿಯಲ್ಲ, ಕುರುಬ. ಪಕ್ಷದಲ್ಲಿ ಎಂದೂ ತಲೆತಗ್ಗಿಸುವ ಕೆಲಸವನ್ನು ಮಾಡಿಲ್ಲ, ಮುಂದೂ ಮಾಡುವುದಿಲ್ಲ. ನಾನು ಪಕ್ಷದ ಏಳ್ಗೆಗಾಗಿ ಶ್ರಮ ವಹಿಸಿ ದುಡಿಯುತ್ತಿದ್ದೇನೆ. ಪಕ್ಷವೂ ನನ್ನನ್ನು ಬೆಳೆಸಿದೆ. ಹಲವು ಹಂತಗಳಲ್ಲಿ ಅಧಿಕಾರವನ್ನೂ ನೀಡಿದೆ. ಅಧಿಕಾರವನ್ನೂ ಅನುಭವಿಸಿದ್ದೇನೆ. ಹೀಗಾಗಿ ನಾನು ಪಕ್ಷಕ್ಕೆ ಎಂದೂ ದ್ರೋಹ ಬಗೆಯುವುದಿಲ್ಲ ಎಂದು ಪುನರುಚ್ಚರಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟುವುದಕ್ಕಿಂತ ಮುನ್ನ ಬಿಜೆಪಿಯಲ್ಲಿ ಸಿಂಹದಂತಿದ್ದರು. ಈಗ ಹಾಗಿಲ್ಲ. ವ್ಯಕ್ತಿ ಮುಖ ನೋಡಿ ಯಾರು ಮತ ಹಾಕುವುದಿಲ್ಲ. ಪಕ್ಷದ ಮೇಲೆ ಅಭಿಮಾನವಿಟ್ಟು ಮತ ಹಾಕುತ್ತಾರೆ ಎಂದು ಯಡಿಯೂರಪ್ಪ ಅವರ ಹೆಸರು ಹೇಳದೆ ಈಶ್ವರಪ್ಪ ಟಾಂಗ್ ನೀಡಿದರು.

ನಾಡಿನ ಜನರಿಗೆ ಯಾರು ಪಕ್ಷದ ಕಟ್ಟಾಳುಗಳು ಎಂಬುದು ಚೆನ್ನಾಗಿ ಗೊತ್ತಿದೆ. ಬಿಎಸ್‌ವೈ ಅವರು ಕೆಜೆಪಿ ಪಕ್ಷ ಕಟ್ಟಿದ ನಂತರ ಪಕ್ಷದಲ್ಲಿ ಆದ ಬೆಳವಣಿಗೆ ಬಗ್ಗೆಯೂ ಗೊತ್ತಿದೆ. ಕೆಜೆಪಿ ಪಕ್ಷ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಪಡೆದುಕೊಂಡಿತು ಎಂಬುದರ ಬಗ್ಗೆಯೂ ಜನರಿಗೆ ತಿಳಿದಿದೆ ಎಂದರು.

Comments are closed.