ಕರ್ನಾಟಕ

‘ಮಾಸ್ತಿಗುಡಿ’ ದುರಂತಕ್ಕೆ ಸಂಬಂಧಿಸಿ ಯಾರ ಯಾರ ಮೇಲೆ ದೂರು ದಾಖಲಾಗಿದೆ ….ಇಲ್ಲಿದೆ ನೋಡಿ…

Pinterest LinkedIn Tumblr

uday-anil

ಬೆಂಗಳೂರು: ಮಾಸ್ತಿಗುಡಿ ಸಿನಿಮಾದ ಖಳನಟರಾದ ಅನಿಲ್ ಮತ್ತು ರಾಘವ್ ಉದಯ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ತಿಗುಡಿ ಚಿತ್ರ ತಂಡದ ಐದು ಮಂದಿ ವಿರುದ್ಧ ದೂರು ದಾಖಲಾಗಿದೆ.

ಐಪಿಸಿ ಸೆಕ್ಷನ್ 304(ಎ) ಹಾಗೂ 308ರ ಅನ್ವಯ ಕೇಸ್ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಚಿತ್ರದ ನಿರ್ಮಾಪಕ ಸುಂದರ್ ಗೌಡ, ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ದು ,ಸಾಹಸ ನಿರ್ದೇಶಕ ರವಿವರ್ಮಾ, ಯೂನಿಟ್ ಮ್ಯಾನೇಜರ್ ಎಸ್.ಭರತ್ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಏತನ್ಮಧ್ಯೆ ಹೆಲಿಕಾಪ್ಟರ್ ನಿಂದ ಕೆರೆಗೆ ಜಿಗಿದು ಅನಿಲ್ ಮತ್ತು ಉದಯ್ ಜಲಸಮಾಧಿಯಾದ ಘಟನೆ ನಂತರ ಸಾಹಸ ನಿರ್ದೇಶಕ ರವಿವರ್ಮಾ ಹಾಗೂ ನಾಗಶೇಖರ್ ಸೇರಿದಂತೆ ಚಿತ್ರತಂಡ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಆದರೆ ಸಿನಿಮಾದ ಹೀರೋ ದುನಿಯಾ ವಿಜಯ್ ಅವರು ಶೋಧಕಾರ್ಯದಲ್ಲಿ ಪಾಲ್ಗೊಂಡಿದ್ದರೆ, ನಟಿ ಅಮೂಲ್ಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.