ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿಜೂರು ರಾಷ್ತ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಮಹೆಂದ್ರ ಪಿಕ್-ಅಪ್ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಇಲ್ಲಿನ ಯಡ್ತರೆ ನಿವಾಸಿ ಅಣ್ಣಪ್ಪ ಪೂಜಾರಿ ಎಂಬವರ ಮಗ ಗುರು ಪೂಜಾರಿ (32) ಎಂದು ತಿಳಿದು ಬಂದಿದೆ.
ಬೈಂದೂರು ಕಡೆಯಿಂದ ಅತಿ ವೇಗದಿಂದ ಬಂದ ಬೈಕ್ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಪಿಕ್-ಅಪ್ ಗಾಡಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರನ ತಲೆಗೆ ತೀವ್ರ ಜಖಂ ಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತನನ್ನು ಬಸ್ಸಿನ ಬದಲೀ ಚಾಲಕನೆಂದು ತಿಳಿದು ಬಂದಿದೆ . ಬೈಂದೂರು ಪೋಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.