ಕರಾವಳಿ

ಬೈಕ್ ಮತ್ತು ಮಹೆಂದ್ರ ಪಿಕ್-ಅಪ್ ನಡುವೆ ಮುಖಾಮುಖಿ : ಬೈಕ್ ಸವಾರ ಸ್ಥಳದಲ್ಲೇ ಸಾವು

Pinterest LinkedIn Tumblr

img-20161025-wa0014

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿಜೂರು ರಾಷ್ತ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಮಹೆಂದ್ರ ಪಿಕ್-ಅಪ್ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಇಲ್ಲಿನ ಯಡ್ತರೆ ನಿವಾಸಿ ಅಣ್ಣಪ್ಪ ಪೂಜಾರಿ ಎಂಬವರ ಮಗ ಗುರು ಪೂಜಾರಿ (32) ಎಂದು ತಿಳಿದು ಬಂದಿದೆ.

img-20161025-wa0015

ಬೈಂದೂರು ಕಡೆಯಿಂದ ಅತಿ ವೇಗದಿಂದ ಬಂದ ಬೈಕ್ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಪಿಕ್-ಅಪ್ ಗಾಡಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರನ ತಲೆಗೆ ತೀವ್ರ ಜಖಂ ಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತನನ್ನು ಬಸ್ಸಿನ ಬದಲೀ ಚಾಲಕನೆಂದು ತಿಳಿದು ಬಂದಿದೆ . ಬೈಂದೂರು ಪೋಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.