ಕ್ರೀಡೆ

ರೋಚಕ ಪಂದ್ಯದಲ್ಲಿ ಕೊನೆಯ ಓವರನ್ನು ರವೀಂದ್ರ ಜಡೇಜಾಗೆ ನೀಡಿದ ಧೋನಿ ನಿರ್ಧಾರ ಸರಿಯೇ…? ಧೋನಿ ಉತ್ತರ….

Pinterest LinkedIn Tumblr

ನಿನ್ನೆ ರಾತ್ರಿ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿ ಐಪಿಎಲ್​ನ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರನ್ನು ರವೀಂದ್ರ ಜಡೇಜಾಗೆ ನೀಡಿದ ಧೋನಿ ನಿರ್ಧಾರ ಸರಿಯೇ…? ಇದು ಈಗ ಎದ್ದಿರುವ ಪ್ರಶ್ನೆ !

ಶಿಖರ್ ಧವನ್ ಅವರ ವೈಭವದ ಶತಕ ಹಾಗೂ ಅಕ್ಷರ್ ಪಟೇಲ್ ಅವರ ಕೊನೆಯ ಓವರ್​ನ ಬ್ಯಾಟಿಂಗ್ ನೆರವಿನಿಂದ ಅಯ್ಯರ್ ಪಡೆ 5 ವಿಕೆಟ್​ಗಳ ಜಯ ಸಾಧಿಸಿದೆ. ಇದರೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಸಿಎಸ್​ಕೆ 6ನೇ ಸೋಲು ಕಂಡಿದೆ. ಈ ಮಧ್ಯೆ ಕೊನೆಯ ಓವರ್​ಅನ್ನು ಬ್ರಾವೋಗೆ ನೀಡಲಿಲ್ಲವೇಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು, ಇದಕ್ಕೆ ಧೋನಿ ಉತ್ತರ ನೀಡಿದ್ದಾರೆ.

ಚೆನ್ನೈ ನೀಡಿದ್ದ 180 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಇನ್ನಿಂಗ್ಸ್​ನ 2ನೇ ಎಸೆತದಲ್ಲೇ ಸೊನ್ನೆ ಸುತ್ತಿದರೆ, ಅಜಿಂಕ್ಯ ರಹಾನೆ 8 ರನ್​ಗೆ ಔಟ್ ಆಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಈ ಸಂದರ್ಭ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಉತ್ತಮ ಜೊತೆಯಾಟ ಆಡಿದರು. ಧವನ್​ ಶತಕ ಕೂಡ ಬಾರಿಸಿದರು.

ಈ ಪಂದ್ಯವನ್ನು ರೋಚಕ ಹಂತಕ್ಕೆ ತೆಗೆದುಕೊಂಡು ಹೋಗಿದ್ದು ಕೊನೆಯ ಓವರ್​. ಕೊನೆಯ 6 ಎಸೆತೆಗಳಲ್ಲಿ 17 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಎಲ್ಲರೂ ಬ್ರಾವೋ ಬೌಲಿಂಗ್​ಗೆ ಬರುತ್ತಾರೆ ಎಂದು ಭಾವಿಸಿದ್ದರು. ಆದರೆ, ಅಚ್ಚರಿ ಎಂಬಂತೆ ಜಡೇಜಾ ಬೌಲಿಂಗ್​ಗೆ ಇಳಿದಿದ್ದರು. ಒಂದೇ ಓವರ್​ನಲ್ಲಿ ಡೆಲ್ಲಿ ತಂಡ ಅನಾಯಾಸವಾಗಿ 17 ರನ್​ ಬಾರಿಸಿತ್ತು.

ಬ್ರಾವೋ ನಿನ್ನೆಯ ಮ್ಯಾಚ್​ನಲ್ಲಿ ಮೂರು ಓವರ್​ ಎಸೆದು 23 ರನ್​ ನೀಡಿ ಒಂದು ವಿಕೆಟ್​ ಕಿತ್ತಿದ್ದರು. ಎಕಾನಮಿ ರೇಟ್​ 7.70 ಇತ್ತು. ಹೀಗಾಗಿ, ಬ್ರಾವೋ ಅವರನ್ನು ಕೊನೆಯ ಓವರ್​ನಲ್ಲಿ ಬೌಲಿಂಗ್​ಗೆ ಕಳುಹಿಸಿದ್ದರೆ ಡೆಲ್ಲಿ ತಂಡದವರಿಗೆ 17 ರನ್​ ಹೊಡೆಯೋದು ಕಷ್ಟವಾಗುತ್ತಿತ್ತು ಎಂಬುದು ಕ್ರಿಕೆಟ್​ ಪಂಡಿತರ ವಾದವಾಗಿತ್ತು.

ಇದಕ್ಕೆ ಧೋನಿ ಸ್ಪಷ್ಟನೆ ನೀಡಿದ್ದಾರೆ. ಬ್ರಾವೋ ಫಿಟ್​ ಆಗಿರಲಿಲ್ಲ. ಹೀಗಾಗಿ, ಅವರ ಬಾಲ್​ ಹಾಕಲು ಸಾಧ್ಯವೇ ಇರಲಿಲ್ಲ. ಹೀಗಾಗಿ, ಕರ್ಣ್​ ಶರ್ಮಾ ಅಥವಾ ಜಡ್ಡು (ಜಡೇಜಾ) ಅವರನ್ನು ಬೌಲಿಂಗ್​ಗೆ ಇಳಿಸಬೇಕಿತ್ತು. ಹೀಗಾಗಿ ಜಡ್ಡುಗೆ ಬಾಲ್​ ನೀಡಿದೆ ಎಂದಿದ್ದಾರೆ ಧೋನಿ.

Comments are closed.