ಲಂಡನ್: ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಅವರ ತಮ್ಮ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್ರನ್ನು ಬೌಲ್ಡ್ ಮಾಡಿದ್ದರು. ಆದರೆ ಬೇಲ್ಸ್ ಬೀಳದ ಕಾರಣ ಅವರ ಜೀವದಾನ ಸಿಕ್ಕಿದ್ದು ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಟೀಂ ಇಂಡಿಯಾ ನೀಡಿದ 353 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಬುಮ್ರಾರ ಬೌಲಿಂಗ್ ಎದುರಿಸಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿ ವಿಕೆಟ್ ಗೆ ಬಡಿಯಿತು. ಆದರೆ ಬೇಲ್ಸ್ ಕೆಳಗೆ ಬೀಳದ ಕಾರಣ ಬುಮ್ರಾ ಅವರಿಗೆ ನಿರಾಶೆಯಾಯಿತು.
ವಿಕೆಟ್ ಗೆ ಚೆಂಡು ಬಡಿದರು ಬೇಲ್ಸ್ ಬೀಳದ್ದಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಎಂಎಸ್ ಧೋನಿ ಬೇಸರ ವ್ಯಕ್ತಪಡಿಸಿದರು.
ಇನ್ನು ಇದೇ ವಿಚಾರವಾಗಿ ನೆಟಿಗರು ಸಹ ಐಸಿಸಿ ವಿರುದ್ಧ ಸಖತ್ ಟ್ರೋಲ್ ಮಾಡುತ್ತಿದ್ದಾರೆ.
Comments are closed.