ಮುಂಬೈ: ಮೇ 30ರಂದು ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ವಿಶ್ವಕಪ್ 2019 ಕದನಕ್ಕೆ ಸಜ್ಜಾಗಿದ್ದು ಇಂದು ಟೀಂ ಇಂಡಿಯಾ ಸದಸ್ಯರು ಆಂಗ್ಲರ ನಾಡಿನತ್ತ ಪಯಣ ಬೆಳೆಸಲಿದ್ದಾರೆ.
ಮುಂಬೈನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಈ ವಿಶ್ವಕಪ್ ತುಂಬ ಸವಾಲನಿಂದ ಕೂಡಿದ್ದು ಯಾರು ಬೇಕಾದರೂ ಗೆಲ್ಲಬಹುದು. ತಂಡವನ್ನು ನಾವು ಬಹಳ ಬೇಗ ಆಯ್ಕೆಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ನಾವು ಎಲ್ಲ ರೀತಿಯ ಮೊತ್ತವನ್ನು ಈ ವಿಶ್ವಕಪ್ನಲ್ಲಿ ನಿರೀಕ್ಷೆ ಮಾಡಬಹುದು ಕೆಲವೇ ಕೆಲವು ಆಟದಲ್ಲಿ ಮಾತ್ರ ಬೃಹತ್ ಮೊತ್ತವನ್ನು ಅಂದಾಜಿಸಬಹುದು ಎಂದು ಅವರು ಹೇಳಿದ್ದಾರೆ.
ನಮ್ಮ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು ಯಾವುದೇ ಸಂದರ್ಭದಲ್ಲಿ ತಂಡ ಸ್ಥಿತಿಗತಿಯನ್ನು ಬದಲಿಸಬಲ್ಲ ಗೇಮ್ ಚೇಂಜರ್ಗಳು ನಮ್ಮ ತಂಡದಲ್ಲಿ ಇದ್ದಾರೆ.
ನಾವು ನಮ್ಮ ತಂಡ ಸಾಮಾರ್ಥ್ಯಕ್ಕೆ ತಕ್ಕ ಆಟವಾಡಿದ್ರೆ ವಿಶ್ವಕಪ್ ನಮ್ಮದಾಗಲಿದ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಅಭಿಪ್ರಾಯಪಟ್ಟಿದ್ದಾರೆ.
ಬಹುಶಃ ಇಂಗ್ಲೆಂಡ್ ನೆಲೆವು ತುಂಬ ಪ್ಲಾಟ್ ಆಗಿದ್ದು ಅಲ್ಲಿನ ವಾತವಾರಣ ಮೇಲೆ ಎಲ್ಲವೂ ನಿಂತಿದೆ. ಒಂದು ವೇಳೆ ನೀವು ಲಂಡನ್ಗೆ ಹೋಗಿದ್ರೆ ತಿಳಿಯುತ್ತೇ, ನೀವು ಅಲ್ಲಿ ಎಲ್ಲದಕ್ಕೂ ಹೊಂದುಕೊಳ್ಳುವಂತೆ ಇರಬೇಕು ಎಂದು ಅವರು ನುಡಿದರು.
ಜೂನ್ 05ರಂದು ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
Comments are closed.