ಕ್ರೀಡೆ

ವಿಜಯ್ ಶಂಕರ್​​ಗೆ 50ನೇ ಓವರ್ ಬೌಲಿಂಗ್ ಮಾಡಲು ಹೇಳಿದ್ದು ಯಾರು?

Pinterest LinkedIn Tumblr


ರೋಚಕತೆಯಿಂದ ಕೂಡಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ ಕೊನೆಗೂ ಕೊಹ್ಲಿ ಪಡೆಯ ಪಾಲಾಗಿದೆ. 8 ರನ್​​ಗಳಿಂದ ಗೆದ್ದು ಬೀಗಿದ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇಡೀ ಪಂದ್ಯದ ಪ್ರಮುಖ ಹೈಲೈಟ್ಸ್​ ಎಂದರೆ ವಿರಾಟ್ ಕೊಹ್ಲಿ ಶತಕ ಹಾಗೂ ವಿಜಯ್ ಶಂಕರ್​​ರ ಕೊನೆಯ ಓವರ್​.

ಅದರಲ್ಲು ಆಸ್ಟ್ರೇಲಿಯಾಕ್ಕೆ ಗೆಲ್ಲಲು ಕೊನೆಯ ಓವರ್​​ನಲ್ಲಿ 11 ರನ್ ಬೇಕಿದ್ದಾಗ ಬೌಲಿಂಗ್ ಮಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ವಿಜಯ್ ಶಂಕರ್ ಹೀರೋ ಆಗಿ ಬಿಟ್ಟರು. ವಿಜಯ್ ಶಂಕರ್ ಇಡೀ ಪಂದ್ಯದಲ್ಲಿ ಮಾಡಿದ್ದು ಕೇವಲ 1.3 ಓವರ್​ಗಳನ್ನಷ್ಟೆ. 50ನೇ ಓವರ್​ಗೂ ಮುನ್ನ 10ನೇ ಓವರ್ ಬೌಲಿಂಗ್ ಮಾಡಿದ್ದ ಶಂಕರ್, ತನ್ನ ಮೊದಲ ಓವರ್​ನಲ್ಲೇ 13 ರನ್ ನೀಡಿದ್ದರು. ಹೀಗಾಗಿ ನಂತರದರಲ್ಲಿ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಆದರೆ, ಕೊನೆಯ ಪ್ರಮುಖ ಓವರ್ ಶಂಕರ್​​ಗೆ ನೀಡಿದ್ದು ಅಚ್ಚರಿಕೆ ಕಾರಣವಾಯಿತು. ಆದರೆ, ಕೊನೆಯ ಓವರ್​​ ಶಂಕರ್ ಬೌಲಿಂಗ್ ಮಾಡಬೇಕು ಎಂಬುದು ನನ್ನ ನಿರ್ಧಾರವಾಗಿರಲಿಲ್ಲ ಎಂದು ಸ್ವತಃ ಕೊಹ್ಲಿ ಹೇಳಿದ್ದಾರೆ.

ನಾನು 46ನೇ ಓವರ್ ಶಂಕರ್ ಅಥವಾ ಕೇದರ್ ಜಾಧವ್​​ಗೆ ನೀಡುವ ಅಂದಾಜಿನಲ್ಲಿದ್ದೆ. ಆದರೆ, ಈ ಸಂದರ್ಭ ಧೋನಿ ಅವರು ಮೊಹಮ್ಮದ್ ಶಮಿ ಅಥವಾ ಜಸ್​ಪ್ರೀತ್ ಬುಮ್ರಾ ಈಗ ಬೌಲೀಂಗ್ ಮಾಡಲಿ. ಇವರ ಓವರ್​ಗಳಲ್ಲಿ ವಿಕೆಟ್ ಉರುಳಿದರೆ ಖಂಡಿತಾಗಿಯು ಗೆಲುವು ನಮ್ಮ ಕೈಹಿಡಯಲಿದೆ ಎಂದರು. ಅದರಂತೆ ಬುಮ್ರಾ 2 ವಿಕೆಟ್ ಕಿತ್ತು ಪಂದ್ಯದ ಗತಿಯನ್ನೇ ಬದಲಾಯಿಸಿದರು.

ಅಂತೆಯೆ ಇನ್ನೂ 1 ಓವರ್ ಬಾಕಿ ಇರುವಂತೆ ಅವರಿಬ್ಬರೂ ಓವರ್​ ಕೂಡ ಮುಕ್ತಾಯವಾಗಿತ್ತು. ಹೀಗಾಗಿ ಕೊನೆಯ ಓವರ್ ಯಾರಿಗೆ ನೀಡವುದು ಎಂಬ ಗೊಂದಲ ಶುರುವಾಯಿತು. ಆಗ ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ವಿಜಯ್ ಶಂಕರ್​​ಗೆ ಬೌಲಿಂಗ್ ನೀಡುವಂತೆ ಸಲಹೆ ನೀಡಿದರು. ಹೀಗಾಗಿ ಶಂಕರ್​ಗೆ 50ನೇ ಓವರ್ ಬೌಲಿಂಗ್ ಮಾಡಲು ಹೇಳಿದೆ. ಶಂಕರ್ ನಾವಿಟ್ಟ ನಂಬಿಕೆಯನ್ನು ಉಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು ಎಂದು ಕೊಹ್ಲಿ ಹೇಳಿದ್ದಾರೆ.

Comments are closed.