ಮುಂಬೈ: ವಿಶ್ವ ಕ್ರಿಕೆಟ್ನ ದೇವರು ಎಂದೇ ಗುರ್ತಿಸಲ್ಪಡುವ ಸಚಿನ್ ತೆಂಡುಲ್ಕರ್ಗಿಂತ ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸಮನ್ ಎನ್ನುವ ಮೂಲಕ ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ವಿವಾದ ಸೃಷ್ಟಿಸಿದ್ದಾರೆ.
ಕಾಫಿ ವಿತ್ ಕರಣ್ ಶೋನಲ್ಲಿ ಈ ಇಬ್ಬರೂ ಪಾಲ್ಗೊಂಡು ಮೇಲಿನ ವಿವಾದವನ್ನು ಮೈಮೇಲೆಳೆದುಕೊಂಡರು. ಟ್ವೀಟರ್ನಲ್ಲಿ ಈ ಬಗ್ಗೆ ಭಾರೀ ವಾದ ವಿವಾದಗಳಾಗಿವೆ. ಇಬ್ಬರೂ ಒಂದು ಪೀಳಿಗೆಯ ಧಾರ್ಮಿಕ ನಂಬಿಕೆಯನ್ನೇ ನೋಯಿಸಿದ್ದಾರೆಂದು ಒಬ್ಬರು ಮಾರ್ಮಿಕವಾಗಿ ಹೇಳಿದ್ದಾರೆ. ಈ ಇಬ್ಬರನ್ನು ನೋಡಿದರೆ ಸಚಿನ್ಗಿಂತ ವಿರಾಟ್ ಶ್ರೇಷ್ಠ ಎನ್ನಲು ಅಡ್ಡಿಯಿಲ್ಲ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ವಿಶೇಷವೆಂದರೆ, ಕೊಹ್ಲಿಗಿಂತ ಧೋನಿ ಶ್ರೇಷ್ಠ ನಾಯಕ ಎಂದು ಇಬ್ಬರೂ ಒಪ್ಪಿಕೊಂಡಿದ್ದಾರೆ.
Comments are closed.