ಮುಂಬೈ: ಕಳೆದೆರಡು ವರ್ಷಗಳ ಹಿಂದೆ ಟೀಂ ಇಂಡಿಯಾದ ಪವರ್ ಹಿಟ್ಟರ್, ಮ್ಯಾಚ್ ಫಿನಿಶರ್ ಎಂಬ ಪಟ್ಟ ಕಟ್ಟಿಕೊಂಡು ತಂಡದ ಖಾಯಂ ಸದಸ್ಯನಾಗಿದ್ದ ಸುರೇಶ್ ರೈನಾ ಸದ್ಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದು, ಅವರನ್ನ ಆಯ್ಕೆ ಮಾಡಲು ಆಯ್ಕೆ ಸಮಿತಿ ಸಹ ಹಿಂದೇಟು ಹಾಕುತ್ತಿದೆ.
ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಹಾಗೂ ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಯಲ್ಲೂ ಅವರನ್ನ ಪರಿಗಣನೆಗೆ ತೆಗೆದುಕೊಳ್ಳದ ಕಾರಣಕ್ಕಾಗಿ ಟ್ವೀಟರ್ನಲ್ಲಿ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂದಿನ ವರ್ಷ ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ ದೃಷ್ಟಿಯಿಂದ ಇದೀಗ ತಂಡಕ್ಕೆ ಆಯ್ಕೆಗೊಳ್ಳುತ್ತಿರುವ ಆಟಗಾರರ ಪ್ರದರ್ಶನ ಮಹತ್ವ ಪಡೆದುಕೊಳ್ಳುವ ಕಾರಣ ರೈನಾಗೆ ಚಾನ್ಸ್ ನೀಡುತ್ತಿಲ್ಲ ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಶತಕ ಸಿಡಿಸಿದ್ರೂ ಅವರಿಗೆ ಚಾನ್ಸ್ ನೀಡದಿರಲು ಕಾರಣ ಏನು ಎಂಬ ಪ್ರಶ್ನೆಯನ್ನ ಕ್ರೀಡಾಭಿಮಾನಿಗಳು ಪ್ರಶ್ನಿಸಿದ್ದು, ಅವರ ಕ್ರಿಕೆಟ್ ವೃತ್ತಿ ಬದುಕು ಸಂಪೂರ್ಣವಾಗಿ ಮುಗಿದು ಹೋಯ್ತಾ ಎಂದು ಕೇಳಿದ್ದಾರೆ. ಈಗಾಗಲೇ ಈ ಹಿಂದೆ ಅನೇಕ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಹಾಗೂ ಮೈದಾನದಲ್ಲಿ ಚುರುಕಾಗಿ ಫಿಲ್ಡಿಂಗ್ ಮಾಡುವ ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ನೆಟಿಜನ್ಸ್ ಕೇಳಿಕೊಂಡಿದ್ದಾರೆ.
ಇದೇ ವರ್ಷ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ರೈನಾ ಆಯ್ಕೆಗೊಂಡಿದ್ದರು. ಅದಾದ ಬಳಿಕ ಮತ್ತೆ ಆಯ್ಕೆ ಸಮಿತಿ ಕೆಂಗಣ್ಣಿಗೆ ಅವರು ಗುರಿಯಾಗಿದ್ದಾರೆ.
Comments are closed.