ದುಬೈ: ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನದ ಸತತ ಸೋಲುಗಳು’ಸ್ವಚ್ಛಭಾರತ್’ ಅಭಿಯಾನದ ಭಾಗವೇ ಎಂದೇ ವ್ಯಂಗ್ಯ ಮಾಡಿದ್ದ ಆ್ಯಂಕರ್ ವಿರುದ್ಧ ಮಾಜಿ ಪಾಕ್ ವೇಗಿ ಶೋಯಬ್ ಅಖ್ತರ್ ಸಿಟ್ಟಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ಸೋಲಿನ ಮೇಲೆ ಸೋಲನುಭವಿಸುತ್ತಿರುವುದಕ್ಕೆ ಸ್ವಲ್ಪ ತಮಾಷೆಯಾಗಿ ಪ್ರಶ್ನಿಸಿದ ಎಬಿಪಿ ನ್ಯೂಸ್ ನಿರೂಪಕನ ವಿರುದ್ದ ಶೋಯಬ್ ಅಖ್ತರ್ ಸಿಟ್ಟಾದ ಘಟನೆ ಇತ್ತೀಚೆಗೆ ನಡೆದಿದೆ.
ಬಲಿಷ್ಠ ಭಾರತ ತಂಡವನ್ನು ಎದುರಿಸಲು ಪಾಕಿಸ್ತಾನ ತಂಡ ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದರು. ಇದು ಅಖ್ತರ್ ಗೆ ಸಿಟ್ಟು ತರಿಸಿತ್ತು. ಕ್ರಿಕೆಟ್ ಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಮಾತ್ರ ಕೇಳಿ, ಬೇರೆ ಬೇಡ ಎಂದು ಅಖ್ತರ್ ಉತ್ತರಿಸಿದರು.
Comments are closed.