ಕ್ರೀಡೆ

ಮಾಸ್ಟರ್ಸ್‌ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ಸ್‌ ಪಟ್ಟ ಗೆದ್ದುಕೊಂಡ ಭಾರತ ! 44-26 ಅಂಕಗಳಿಂದ ಇರಾನ್‌’ನ್ನು ಬಗ್ಗುಬಡಿದ ಅಜಯ್ ಠಾಕೂರ್ ಪಡೆ

Pinterest LinkedIn Tumblr

ದುಬೈ: ವಿಶ್ವ ಚಾಂಪಿಯನ್ಸ್‌ ಭಾರತ ತಂಡ ಇಲ್ಲಿ ನಡೆದ ಚೊಚ್ಚಲ ಮಾಸ್ಟರ್ಸ್‌ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ಸ್‌ ಪಟ್ಟ ಗೆದ್ದುಕೊಂಡಿದೆ.

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಫೈನಲ್‌ನಲ್ಲಿ ಕಣಕ್ಕಿಳಿದ ಅಜಯ್‌ ಠಾಕೂರ್‌ ಬಳಗ 44-26 ಅಂಕಗಳಿಂದ ಇರಾನ್‌ ತಂಡವನ್ನು ಬಗ್ಗು ಬಡಿದು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ನಾಯಕನ ಆಟವಾಡಿದ ರೇಡರ್‌ ಅಜಯ್‌ ಠಾಕೂರ್‌ 9 ರೇಡಿಂಗ್‌ ಅಂಕ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಪ್ರಥಮಾರ್ಧಕ್ಕೆ ಭಾರತ ರೇಡಿಂಗ್‌ ಮತ್ತು ಕ್ಯಾಚಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್‌ ತಿರುಗೇಟು ನೀಡುವ ಯತ್ನ ನಡೆಸಿತು. ಇದರ ನಡುವೆ ಮಿಂಚಿದ ರಿಶಾಂಕ್‌, ಠಾಕೂರ್‌ ಮತ್ತು ಗೋಯಟ್‌ ಭಾರತದ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು. ಮೊದಲಾರ್ಧಕ್ಕೆ 18-11ರಲ್ಲಿ ಮುನ್ನಡೆ ಕಂಡುಕೊಂಡ ಭಾರತ, ಕೆಲವು ಬಾರಿ ಹೊಂದಾಣಿಕೆ ಆಟ ಪ್ರದರ್ಶಿಸುವಲ್ಲಿ ಎಡವಿದರೂ ಎದುರಾಳಿ ತಂಡಕ್ಕೆ ಅಂಕ ಬಿಟ್ಟುಕೊಡಲಿಲ್ಲ.

Comments are closed.