ಕೊಲಂಬೊ: ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ತ್ರಿಕೋನ ಸರಣಿಯಲ್ಲಿ ಭಾರತದ ಯುವ ಪ್ರತಿಭಾವಂತ ಭರವಸೆಯ ಬ್ಯಾಟ್ಸ್ಮನ್ ವಿಜಯ್ ಶಂಕರ್ ಪದಾರ್ಪಣೆಗೈದಿದ್ದಾರೆ.
26ರ ಹರೆಯದ ಈ ತಮಿಳುನಾಡಿನ ಆಲ್ರೌಂಡರ್ ಆಟಗಾರ ದೇಶೀಯ ದರ್ಜೆಯಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಳೆದ ಬಾರಿ ಚಾಂಪಿಯನ್ ಸನ್ರೈಸರ್ಸ್ ಹೈದರಾಬಾದ್ ಭಾಗವಾಗಿದ್ದರು. ಈ ಬಾರಿ ಡೆಲ್ಲಿ ಡೇರ್ಡೆವಿಲ್ಸ್ ಪಾಲಾಗಿದ್ದಾರೆ.
ಬಲಗೈ ದಾಳಿಯನ್ನು ಮಾಡುವ ವಿಜಯ್ ಶಂಕರ್ ಹೇಗೆ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಲಿದ್ದಾರೆ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.
Comments are closed.