ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬಹುಕೋಟಿ ಉದ್ಯಮಿ ಉಡುಪಿ ಮೂಲದ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೋಮವಾರ) ಆರೋಪಿಗಳನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಜು.28, 2016 ಕ್ಕೆ ಭಾಸ್ಕರ ಶೆಟ್ಟಿ ಕೊಲೆಯಾಗಿತ್ತು. ರಾಜೇಶ್ವರಿ ಶೆಟ್ಟಿ, ನವನೀತ ಶೆಟ್ಟಿ, ನಿರಂಜನ್ ಭಟ್ ಕೊಲೆ ಆರೋಪಿಗಳು. ಮೂವರಿಗೂ ನವೆಂಬರ್ 28 ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಪುನಃ ನ.28 ವಿಚಾರಣಾ ದಿನಾಂಕ ನಿಗದಿ ಮಾಡಲಾಗುತ್ತೆ.
ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದ ವೇಳೆ ನ್ಯಾಯಾಧೀಶರು ದೋಷಾರೋಪ ಪಟ್ಟಿ ವಾಚಿಸಿದ್ದು ಆರೋಪ ಒಪ್ಪಲು ಆರೋಪಿಗಳು ನಿರಾಕರಿಸಿದ್ದಾರೆ.
ಶಿವಮೊಗ್ಗ ಜೈಲಿಗೆ ಆರೋಪಿಗಳನ್ನು ರವಾನಿಸಲಾಗಿದೆ.
Comments are closed.