ಕ್ರೀಡೆ

ಬನ್ನಿ, ಆಡಿ ಇಂದೇ ಗೆಲ್ಲಿರಿ! ಯುವ ಬೌಲರ್ ಗಳಿಗೆ ಕೊಹ್ಲಿ!

Pinterest LinkedIn Tumblr

ಕಾನ್ಪುರ: ಐಪಿಎಲ್ ನಲ್ಲಿ ಮಿಂಚಿದ ಹಾಗೆ ಇಲ್ಲೂ ಆಡಿ ಗೆದ್ದು, ಟೀಂ ಇಂಡಿಯಾದಲ್ಲಿ ಸ್ಥಿರ ಸ್ಥಾನ ಪಡೆಯಿರಿ ಎಂದು ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಯುವ ಬೌಲರ್ ಗಳಿಗೆ ಆಹ್ವಾನವಿತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟಿ-ಟ್ವೆಂಟಿ ಸರಣಿಯಲ್ಲಿ ಯುವ ಕ್ರಿಕೆಟಿಗರದ್ದೇ ಕಾರುಬಾರು. ಇದನ್ನು ಸರಿಯಾಗಿ ಬಳಸಿಕೊಂಡು ಚೆನ್ನಾಗಿ ಆಡಿದರೆ ತಂಡದಲ್ಲಿ ಖಾಯಂ ಸ್ಥಾನ ಸಿಗಬಹುದು ಎಂದು ಕೊಹ್ಲಿ ಯುವ ಬೌಲರ್ ಗಳಾದ ಪರ್ವೇಜ್ ರಸೂಲ್, ಯಜುವೇಂದ್ರ ಚಾಹಲ್ ಗೆ ಆಫರ್ ಕೊಟ್ಟಿದ್ದಾರೆ.

ಇವರಿಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆಡಿದವರು. ಹಾಗಾಗಿ ಕೊಹ್ಲಿಗೆ ಇವರಿಬ್ಬರು ಹೇಗೆ ಬೌಲಿಂಗ್ ಮಾಡುತ್ತಾರೆಂದು ಚೆನ್ನಾಗಿ ಗೊತ್ತು. ಹಾಗಾಗಿ ಇವರೀಗ ನಾಯಕನ ಆಫರ್ ನ್ನು ಗಂಭೀರವಾಗಿ ಪರಿಗಣಿಸಲೇ ಬೇಕು.

ಪ್ರತಿಯೊಬ್ಬರೂ ಚೆನ್ನಾಗಿ ಆಡುತ್ತಾರೆಂಬ ಕಾರಣಕ್ಕೆ ತಂಡಕ್ಕೆ ಆರಿಸಿಕೊಳ್ಳಲಾಗಿದೆ. ಯಾರು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಖಾಯಂ ಸ್ಥಾನ ಗ್ಯಾರಂಟಿ ಎಂದು ಹಿರಿಯ ಬ್ಯಾಟ್ಸ್ ಮನ್ ಸುರೇಶ್ ರೈನಾ ಕುರಿತು ಕೇಳಿದ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದ್ದಾರೆ. ಹಾಗಾಗಿ ಯಾರು ಈಗ ನಾಯಕನ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸುತ್ತಾರೆಂದು ನೋಡಬೇಕು.

Comments are closed.