ಕ್ರೀಡೆ

ದೋನಿಗೆ ನಾಯಕತ್ವ ತ್ಯಜಿಸಲು ಬಿಸಿಸಿಐ ಒತ್ತಡ ಹೇರಿಲ್ಲ!

Pinterest LinkedIn Tumblr


ನವದೆಹಲಿ: ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸುವಂತೆ ಮಹೇಂದ್ರಸಿಂಗ್ ದೋನಿಗೆ ಬಿಸಿಸಿಐ ಒತ್ತಾಯ ಹೇರಲಿಲ್ಲ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದಾರೆ.

ನಾಯಕ ಸ್ಥಾನ ತ್ಯಜಿಸುವಂತೆ ಬಿಸಿಸಿಐ ಹೇಳಲಿಲ್ಲ, ದೋನಿಯವರೇ ಈ ನಿರ್ಧಾರ ತೆಗೆದುಕೊಂಡಿದ್ದರು ಎಂದು ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

ತಂಡವನ್ನು ಮುನ್ನಡೆಸಲು ವಿರಾಟ್ ಕೊಹ್ಲಿಯೇ ಅರ್ಹ ವ್ಯಕ್ತಿ. ಹಾಗಾಗಿ ನಾಯಕ ಸ್ಥಾನ ತ್ಯಜಿಸುವಂತೆ ಬಿಸಿಸಿಐ ದೋನಿಗೆ ಹೇಳಿತ್ತು ಎಂಬ ಸುದ್ದಿ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಸಾದ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಕೆಟ್‍ನೆಕ್ಸ್ಟ್ ಜತೆ ಮಾತನಾಡಿದ ಪ್ರಸಾದ್, 9 ವರ್ಷಗಳ ಕಾಲ ನಾಯಕ ಸ್ಥಾನ ನಿರ್ವಹಿಸಿ, ಅದನ್ನು ತ್ಯಜಿಸುವ ನಿರ್ಧಾರ ದೋನಿಯ ವೈಯಕ್ತಿಕ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.

ನಾಯಕ ಸ್ಥಾನ ತ್ಯಜಿಸಲು ದೋನಿಯ ಮೇಲೆ ಯಾವುದೇ ಒತ್ತಡವಿರಲಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ.

ನಾಗ್ಪುರದಲ್ಲಿ ಜಾರ್ಖಂಡ್ ಮತ್ತು ಗುಜರಾತ್ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ದೋನಿ ಈ ನಿರ್ಧಾರವನ್ನು ನನಗೆ ಹೇಳಿದ್ದರು ಎಂದಿದ್ದಾರೆ ಪ್ರಸಾದ್.

Comments are closed.