ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬಳಿಕ ಭಾರತಕ್ಕೆ ಎಚ್ಚರಿಕೆ ನೀಡಿದ್ದ ಪಾಕ್ ನ ಮಾಜಿ ಕ್ರಿಕೆಟಿಗ ಜಾವೇದ ಮಿಯಾಂದಾದ್ ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮತ್ತು ಯುದ್ಧಭೂಮಿ ಎರಡರಲ್ಲೂ ಕಂಡ ಸೋಲಿನಿಂದ ಜಾವೇದ್ ಮಿಯಾಂದಾದ್ ಇನ್ನು ಸುಧಾರಿಸಿಕೊಂಡಿಲ್ಲ ಎಂದು ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.
ಪಾಕ್ ಟಿವಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ಮಿಯಾಂದಾದ್ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನಾ ಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಭಾರತ ವಿರುದ್ಧ ಯಾವುದೇ ಯುದ್ಧಕ್ಕೂ ಪಾಕಿಸ್ತಾನ ತಯಾರಿದೆ ಎಂದು ಹೇಳಿದ್ದರು.
ಇದಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಅನುರಾಗ್ ಠಾಕೂರ್, ಪಾಕಿಸ್ತಾನ 1965, 1971 ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾರತದಿಂದ ಉಂಟಾದ ಅಘಾತದಿಂದ ಇನ್ನು ಹೊರಬಂದಿಲ್ಲ. ಅದರಂತೆ ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಂದು ಪಂದ್ಯವನ್ನು ಗೆಲ್ಲದಿರುವ ಹತಾಶೆ ಇದೆ. ಅವಶ್ಯಕತೆ ಇದ್ದರೆ, ಭಾರತ ಕ್ರಿಕೆಟ್ ಮೈದಾನ ಅಥವಾ ಯುದ್ಧಭೂಮಿಯಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಧೂಳೆಬ್ಬಿಸುತ್ತದೆ ಎಂದಿದ್ದಾರೆ.
Comments are closed.