ಮನೋರಂಜನೆ

‘ಬಿಗ್ ಬಾಸ್’ ಮನೆಯ ಶಾಕಿಂಗ್ ನ್ಯೂಸ್ ! ಪ್ರಶಾಂತ್ ಸಂಬರಗಿ-ವೈಷ್ಣವಿ ಔಟ್! ಫೈನಲಿಗೆ ಅರವಿಂದ್ ಕೆಪಿ, ಮಂಜು ಪಾವಗಡ ಮತ್ತು ದಿವ್ಯಾ ಯು

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ಮನೆ ಫಿನಾಲೆ ಹಂತದಲ್ಲಿ ಇದೆ. ಶನಿವಾರದ ಎಪಿಸೋಡ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಹೊರಗೆ ಬಂದಿದ್ದಾರೆ. ಐದನೆಯವರಾಗಿ ಪ್ರಶಾಂತ್ ಮನೆಯಿಂದ ಹೊರಗೆ ಬಂದಿದ್ದಾರೆ.

ಫಿನಾಲೆಯಲ್ಲಿ ಅರವಿಂದ್ ಕೆಪಿ, ಮಂಜು ಪಾವಗಡ ಮತ್ತು ದಿವ್ಯಾ ಯು. ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅನೇಕ ವಿಚಾರಗಳನ್ನು ಸುದೀಪ್ ಹೊರಗೆ ತೆಗೆದರು. ಕೈಯಲ್ಲಿ ಟ್ರೋಫಿ ಒಂದು ಇಲ್ಲ..ಫಿನಾಲೆಗೆ ತಲುಪಿದ ಎಲ್ಲರೂ ವಿನ್ನರ್ ಗಳೆ ಎಂದು ಪ್ರಶಾಂತ್ ಬಣ್ಣಿಸಿದರು.

ಪ್ರಶಾಂತ್ ಅಂದರೆ ಯಾರು ಎಂಬುದನ್ನು ಇಡೀ ಕರ್ನಾಟಕ್ಕೆ ಬಿಗ್ ಬಾಸ್ ಪರಿಚಯ ಮಾಡಿಕೊಟ್ಟಿತು. ನಾನು ಹೋರಾಟದಿಂಲೇ ಬಂದವನು ಅದನ್ನು ಮುಂದುವರಿಸಿಕೊಂಡೇ ಹೋಗುತ್ತೇನೆ ಎಂದು ಪ್ರಶಾಂತ್ ತಿಳಿಸಿದರು.

ಪ್ರಶಾಂತ್ ಏನ್ ಹೇಳಿದ್ರು?
ತಾವು ಎಲಿಮಿನೇಟ್ ಆಗಿರುವುದು ತಿಳಿಯುತ್ತಿದ್ದಂತೆ ಕೊಂಚ ಭಾವುಕರಾದ ಪ್ರಶಾಂತ್, ‘ಇಂಥದ್ದೊಂದು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಬಿಗ್ ಬಾಸ್. ಇದೊಂದು ಅದ್ಭುತ ಅವಕಾಶ’ ಎಂದರು. ಅದಕ್ಕೂ ಮುನ್ನ ಸುದೀಪ್, ಈ ಐವರಲ್ಲಿ ಯಾರು ಹೊರಗೆ ಬರಬಹುದು ಎಂದು ಕೇಳಿದ್ದರು. ಅದಕ್ಕೆ ಮನೆಯ ಸದಸ್ಯರು ಮತ್ತು ಈಗಾಗಲೇ ಮನೆಯಿಂದ ಎಲಿಮಿನೇಟ್ ಆಗಿರುವ ಬಹುತೇಕ ಸ್ಪರ್ಧಿಗಳ ಆಯ್ಕೆ ಪ್ರಶಾಂತ್ ಅವರೇ ಆಗಿದ್ದರು.

ಪ್ರಶಾಂತ್‌ಗೆ ಬಂದ ವೋಟ್‌ಗಳೆಷ್ಟು?
ಟಾಪ್ 5ರಲ್ಲಿ ಸ್ಥಾನ ಪಡೆದುಕೊಂಡಿದ್ದ ಪ್ರಶಾಂತ್ ಸಂಬರಗಿಗೆ ಬಂದ ಮತಗಳೆಷ್ಟು? ಬಿಗ್ ಬಾಸ್ ವೇದಿಕೆ ಮೇಲೆ ಆ ಸತ್ಯ ಕೂಡ ಗೊತ್ತಾಗಿದೆ. ಕಿಚ್ಚ ಸುದೀಪ್ ಅವರು ಪ್ರಶಾಂತ್ ಪಡೆದುಕೊಂಡ ಮತಗಳ ಬಗ್ಗೆ ಮಾಹಿತಿ ಹಂಚಿಕೊಂಡರು. 6,69,020 ವೋಟ್‌ಗಳು ಪ್ರಶಾಂತ್‌ಗೆ ಬಂದಿದ್ದವು. ಅಲ್ಲದೆ, ಪ್ರಶಾಂತ್ ಶೋನಿಂದ ಹೊರಬಿದ್ದರೂ ಕೂಡ, ಬರಿಗೈನಲ್ಲಿ ಮನೆಗೆ ಹೋಗುವುದಿಲ್ಲ. ಅವರಿಗೆ 2.5 ಲಕ್ಷ ರೂ. ನಗದು ಹಣ ಬಹುಮಾನದ ರೂಪವಾಗಿ ಸಿಗಲಿದೆ.

ಪ್ರಶಾಂತ್ ಹೊರಬರಲು ಕಾರಣವೇನು?
ಪ್ರಶಾಂತ್‌ಗೆ ಎಂಟರ್‌ಟೇನ್‌ಮೆಂಟ್ ಹಿನ್ನೆಲೆ ಇರಲಿಲ್ಲ. ಜೊತೆಗೆ ಒಂದಷ್ಟು ಗಲಾಟೆಗಳು ಕೂಡ ಮನೆಯಲ್ಲಿ ಆಗಿದ್ದವು. ಟಾಸ್ಕ್‌ಗಳಲ್ಲಿ ಕೂಡ ಅವರು ಗೆದ್ದಿದ್ದು ಕೂಡ ಕಡಿಮೆ. ಜೊತೆಗೆ ಹಲವು ಬಾರಿ ಅವರು ನಾಮಿನೇಟ್ ಆಗುತ್ತಲೇ ಇದ್ದರು. ಕಳಪೆ ಪಟ್ಟವನ್ನು ಕೂಡ ಪಡೆದುಕೊಳ್ಳುತ್ತಿದ್ದರು. ಬಹುಶಃ ಇದೆಲ್ಲವೂ ಅವರ ಎಲಿಮಿನೇಷನ್‌ಗೆ ಕಾರಣವಾಗಿರಬಹುದು.

Comments are closed.