ಮನೋರಂಜನೆ

ಕೋವಿಡ್-19 ಎರಡನೇ ಅಲೆ; ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ.ದೇಣಿಗೆ ನೀಡಿದ ರಜನಿಕಾಂತ್

Pinterest LinkedIn Tumblr

ಚೆನ್ನೈ: ಕೋವಿಡ್-19 ಎರಡನೇ ಅಲೆ ವಿರುದ್ಧದ ಹೋರಾಟಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೂಪರ್ ಸ್ಟಾರ್ ರಜನಿಕಾಂತ್ 50 ಲಕ್ಷ ರೂ.ದೇಣಿಗೆಯನ್ನು ನೀಡಿದ್ದಾರೆ.

ಸೋಮವಾರ ಸಚಿವಾಲಯದಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾದ ರಜನಿಕಾಂತ್ 50 ಲಕ್ಷ ರೂ. ದೇಣಿಗೆಯ
ಚೆಕ್ ನ್ನು ಹಸ್ತಾಂತರಿಸಿದರು.ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಜನರು ಪಾಲಿಸುವಂತೆ ಮನವಿ ಮಾಡಿದರು.

ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸ್ಟಾಲಿನ್ ಜನರಲ್ಲಿ ಮನವಿ ಮಾಡಿದ ನಂತರ ರಜನಿಕಾಂತ್ ದೇಣಿಗೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ನಿನ್ನೆ 12,450 ಹೊಸ ಕೋವಿಡ್-19 ಪ್ರಕರಣಗಳು, 20,905 ಗುಣಮುಖ ಹಾಗೂ 303 ಸಾವಿನ ಪ್ರಕರಣಗಳು ವರದಿಯಾಗಿವೆ.

Comments are closed.