ಮನೋರಂಜನೆ

ಗುರುತೇ ಸಿಗದಂತೆ ಆದ ಜನಪ್ರಿಯ ಹಾಸ್ಯ ನಟ!

Pinterest LinkedIn Tumblr


ತಮಿಳು ಚಿತ್ರರಂಗದಲ್ಲಿ ಕಳೆದ 27 ವರ್ಷಗಳಿಂದ ಸಕ್ರಿಯರಾಗಿರುವ ಜನಪ್ರಿಯ ಹಾಸ್ಯ ನಟ ತಾವಸಿ ಅವರಿಗೆ ಈಗ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಕ್ಯಾನ್ಸರ್ ನಿಂದಾಗಿ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಕುರಿತು ಚಿತ್ರರಂಗದ ಗಣ್ಯರಲ್ಲಿ ಸಹಾಯ ಕೇಳಿದ್ದಾರೆ.

ಕ್ಯಾನ್ಸರ್‌ನಿಂದಾಗಿ ತಾವಸಿ ಸಿಕ್ಕಾಪಟ್ಟೆ ತೂಕ ಕಳೆದುಕೊಂಡು, ಗುರುತೇ ಸಿಗದಂತೆ ಆಗಿದ್ದಾರೆ. ‘ನಾನು 1993ರಲ್ಲಿ ಮೊದಲ ಬಾರಿಗೆ ‘ಕಿಳಕ್ಕು ಚೀಮಯಿಲೆ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ರಜನಿಕಾಂತ್ ಅವರ ‘ಅಣ್ಣಾಥೆ’ ಸಿನಿಮಾದವರೆಗೂ ನಟಿಸುತ್ತಲೇ ಇದ್ದೇನೆ. ನಾನೆಂದಿಗೂ ಇಂಥದ್ದೊಂದು ಕಾಯಿಲೆಯಿಂದ ಬಳಲುತ್ತೇನೆ ಎಂದುಕೊಂಡಿರಲಿಲ್ಲ. ಸಿನಿಮಾರಂಗದವರು ನನಗೆ ಸಹಾಯ ಮಾಡಿ’ ಎಂದು ತಾವಸಿ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ತಾವಸಿಗೆ ಸಹಾಯ ಮಾಡುವಂತೆ ಸಿನಿಮಾ ತಾರೆಯರಿಗೆ ನೆಟ್ಟಿಗರು ಮನವಿ ಮಾಡುತ್ತಿದ್ದಾರೆ.

ತಾವಸಿ ಅವರ ವಿಡಿಯೋ ವೈರಲ್ ಆಗುತ್ತಲೇ ತಮಿಳು ತಾರೆಯರು ಸಹಾಯಕ್ಕೆ ಮುಂದಾಗಿದ್ದಾರೆ. ‘ಸೂಪರ್ ಸ್ಟಾರ್’ ರಜನಿಕಾಂತ್ ಕರೆಮಾಡಿ, ತಾವಸಿ ಅವರೊಂದಿಗ ಮಾತನಾಡಿದ್ದಾರೆ. ಬೇಗ ಗುಣವಾಗುವಂತೆ ಹಾರೈಸಿದ್ದಾರೆ. ತಮ್ಮ ಅಭಿಮಾನಿ ಸಂಘದ ಸದಸ್ಯರ ಮೂಲಕ ಆರ್ಥಿಕ ಸಹಾಯವನ್ನು ಮಾಡಲು ಮುಂದಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ, ಅಭಿಮಾನಿಗಳು ರಜನಿಕಾಂತ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ನಟ ವಿಜಯ್ ಸೇತುಪತಿ, ಸಿಂಬು, ಸೂರಿ, ಸೌಂದರಾಜಾ ಮುಂತಾದವರು ತಾವಸಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ, ತಾವಸಿ ಅವರ ಆಸ್ಪತ್ರೆ ಬಿಲ್‌ಗಳನ್ನು ಭರಿಸುವುದಾಗಿ ನಟ ಶಿವಕಾರ್ತಿಕೇಯನ್ ಹೇಳಿದ್ದಾರಂತೆ. ಅಂದಹಾಗೆ, ಶಿವ ನಟಿಸಿದ್ದ ‘ವರುಥಪಡಥ ವಾಲಿಬರ್ ಸಂಘಂ’, ‘ರಜನಿ ಮುರಗನ್’ ಸಿನಿಮಾಗಳಲ್ಲಿ ತಾವಸಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Comments are closed.