ಮನೋರಂಜನೆ

ಗಾಂಜಾ ಗಿಡ ತುಳಸಿಯಂತೆಯೇ ಪವಿತ್ರ ಎಂದು ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಎಫ್ಐಆರ್​

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ನಟಿ ನಿವೇದಿತಾ ವಿರುದ್ಧ ಎಫ್ಐಆರ್​ ದಾಖಲಾಗಿದೆ. ಗಾಂಜಾ ಎನ್ನುವುದು ತುಳಸಿಯಷ್ಟೇ ಪವಿತ್ರ ಎಂದು ಮಾದ್ಯಮಗಳೆದುರು ಹೇಳಿಕೆ ನೀಡಿದ್ದ ನಟಿಯ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಟಿಯ ವಿರುದ್ಧ ಎ.ದೀಪಕ್ ಎನ್ನುವವರು ದೂರು ದಾಖಲಿಸಿದ್ದಾರೆ. ಸೆ. 1ರಂದು ಚಿತ್ರೋದ್ಯಮದಲ್ಲಿ ಡ್ರಗ್ಸ್ ವಿಚಾರವಾಗಿ ಮಾದ್ಯಮದೊಡನೆ ಮಾತನಾಡಿದ್ದ ನಟಿ ನಿವೇದಿತಾ ” ಗಾಂಜಾ ತುಳಸಿಯಷ್ಟೇ ಪವಿತ್ರ. ಆಯುರ್ವೇದದಲ್ಲಿ ಗಾಂಜಾ ಗಿಡಕ್ಕೆ ಭಾರೀ ಮಹತ್ವವಿದೆ. ಬ್ರಿಟೀಷರು ಅವರ ಇಂಗ್ಲೀಶ್ ಔಷಧಿಯ ಬಳಕೆ ಹೆಚ್ಚಾಗುವಂತೆ ಮಾಡಲು ಗಾಂಜಾವನ್ನು ನಿಷೇಧಿತ ಪಟ್ಟಿಗೆ ಸೇರಿಸಿದ್ದರು” ಎಂದು ಹೇಳಿದ್ದರು.

Comments are closed.