
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಶೀಘ್ರದಲ್ಲೇ ಗುಣಮುಖನಾಗಿ ಹೊರಬರಲಿದ್ದೇನೆ ಎಂದಿದ್ದಾರೆ.
ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಾಕಿಕೊಂಡಿರುವ ಮಣಿಕಾಂತ್ ಕದ್ರಿ, ‘ನನಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಮನೆಯಲ್ಲಿಯೇ ಕ್ವಾರಟೈನ್ ಆಗಿ ಗುಣಮುಖನಾಗುತ್ತಿದ್ದೇನೆ. ಕೊರೋನಾ ಪರೀಕ್ಷೆ ಮತ್ತು ತಪಾಸಣೆಯ ಬಗ್ಗೆ ಸರ್ಕಾರ ನೀಡಿರುವ ಸೌಲಭ್ಯವನ್ನು ಪ್ರಶಂಸಿಸಬೇಕು!!, ಸುಲಭ, ಸ್ನೇಹಪರ, ಸ್ವಚ್ಛ ಮತ್ತು ಕಾಳಜಿ!! ಎಂದು ಬರೆದುಕೊಂಡಿದ್ದಾರೆ.
ಅದರ ಜೊತೆಗೆ ಕೊರೋನಾದ ಬಗ್ಗೆ ಜನರಿಗೆ ಟಿಪ್ಸ್ ನೀಡಿದ್ದಾರೆ. ಚಿಂತಿಸಬೇಡಿ, ಭಯಪಡಬೇಡಿ. ಆದರೆ ನಿರ್ಲಕ್ಷಿಸಬೇಡಿ. ಎಲ್ಲಾ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ, ಸುರಕ್ಷಿತವಾಗಿರಿ. ಎಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಸ್ಯಾಂಡಲ್ವುಡ್ ನಟ ಧ್ರುವಾ ಸರ್ಜಾ, ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇವರೆಲ್ಲರು ಕ್ವಾರಂಟೈನ್ ಆಗುವ ಮೂಲಕ ಸರಿಯಾದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿದ್ದಾರೆ. ಇದೀಗ ಮಣಿಕಾಂತ್ ಕದ್ರಿ ಅವರಿಗೂ ಕೊರೋನಾ ತಗುಲಿದೆ. ಅನೇಕರು ಇವರ ಫೇಸ್ಬುಕ್ ಪೋಸ್ಟ್ ನೋಡಿ ಬೇಗ ಗುಣಮುಖರಾಗಿ ಎಂದು ಕಾಮೆಂಟ್ ಬರೆಯುತ್ತಿದ್ದಾರೆ.
ಮಣಿಕಾಂತ್ ಕದ್ರಿ ಮಂಗಳೂರಿನವರಾಗಿದ್ದು, ಸ್ಯಾಂಡಲ್ವುಡ್ನ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಹಿಂದಿ, ತೆಲುಗು, ಮಲಯಾಳಂ, ತಮಿಳು, ತುಳು ಸಿನಿಮಾಗಳಿಗೆ ಸಂಗೀತದ ಸಂಯೋಜಿಸಿದ್ದಾರೆ. ಕನ್ನಡದಲ್ಲಿ ಜಾತ್ರೆ, ರನ್ ಆ್ಯಂಟೋನಿ, ಮೀನಾ ಬಜಾರ್ಮ ಮೂಕ ಹಕ್ಕಿ, ಮಾರ್ಚ್ 22, ವರ್ಜಿನ್, ಆಡಿಸಿದಾತ ಸಿನಿಮಾಗೆ ಸಂಗೀತ ನೀಡಿದ್ದಾರೆ.
Comments are closed.