ಮಹಾಮಾರಿ ಕೊರೋನಾ ವೈರಸ್ನಿಂದಾಗಿ ದೇಶವೇ ನಡುಗಿ ಹೋಗಿದೆ. ಅನೇಕ ಜನರನ್ನು ಕೋವಿಡ್ ಮಹಾಮಾರಿ ಬಲಿ ತೆಗೆದುಕೊಂಡಿದೆ. ಇಂತಹ ಸಂದರ್ಭ ಒಂದೆಡೇಯಾದರೆ ಇತ್ತ ಭಾರತೀಯ ಚಿತ್ರರಂಗದಲ್ಲಿ ಘಟಾನುಘಟಿ ನಟರು ಸಾವನಪ್ಪುತ್ತಿದ್ದಾರೆ.
ಬಾಲಿವುಡ್ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಮಾಡುವ ಮೂಲಕ ಸಾವನಪ್ಪಿದ್ದಾರೆ. ಸಾಕಷ್ಟು ಸಿನಿಮಾದಲ್ಲಿ ಸುಶಾಂತ್ ಸಿಂಗ್ ನಟಿಸಿದ್ದರು. ಬಾಲಿವುಡ್ನಲ್ಲಿ ಧೋನಿ ಕುರಿತಾಗಿ ಮೂಡಿಬಂದಿರುವ ಧೋನಿ; ದಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ನಟಿಸಿ ಅನೇಕ ಮೆಚ್ಚುಗೆಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಭಾರಿ ನೋವುಂಟು ಮಾಡಿದೆ.
ಸುಶಾಂತ್ ಸಿಂಗ್ ಸಾವಿಗೆ ಶರಣಾಗುವ ಮೂಲಕ ಕಳೆದೆರಡು ತಿಂಗಳಿನಲ್ಲಿ ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್, ರಿಷಿ ಕಪೂರ್, ವಾಜಿದ್ ಖಾನ್ ಸಾವನ್ನಪ್ಪಿದ್ದಾರೆ. ‘ರಜನಿಗಂಧ’ ಸೇರಿದಂತೆ ಹಲವಾರು ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಬಸು ಚಟರ್ಜಿ ಜೂನ್ 4 ರಂದು ನಿಧನರಾಗಿದರು. ಖ್ಯಾತ ಗೀತೆ ರಚನೆಗಾರ ಯೊಗೇಶ್ ಕೌರ್ ಮೇ 29ರಂದು ಸಾವನ್ನಪ್ಪಿದ್ದರು. ಹೀಗೆ ಕಳೆದೆರಡು ತಿಂಗಳಿನಿಂದ ಕಲಾವಿದರ ಸಾವು ಬಾಲಿವುಡ್ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದೆ.
“ಕ್ರೈಂ ಪೆಟ್ರೋಲ್” ನಟಿ ಪ್ರೇಕ್ಷ ಮೆಹ್ತಾ ಇಂದೋರಿನ ತನ್ನ ಮನೆಯಲ್ಲಿ ಮೇ 25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಮಿಳ್ ನಟ ಡಾ. ಸೇತುರಾಮನ್ ಹೃದಯಾಘಾತದಿಂದ ಇತ್ತೀಚೆಗೆ ಸಾವನ್ನಪ್ಪಿದ್ದಾರೆ. ಬಾಲಿವುಡ್ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಇತ್ತೀಚಿಗೆ ವಿಧಿವಶರಾಗಿದ್ದಾರೆ.
ಕಲಾವಿದರನ್ನು ಕಳೆದುಕೊಂಡ ದುಃಖದಲ್ಲಿ ಸ್ಯಾಂಡಲ್ವುಡ್!
2020ನೇ ವರ್ಷ ಎಲ್ಲರಿಗೂ ಕಂಟಕವನ್ನು ತಂದೊಡ್ಡಿದೆ. ಕೊರೋನಾದಿಂದ ಈಗಾಗಲೇ ಅನೇಕ ಸಾವು-ನೋವು ಸಂಭವಿಸಿದೆ. ಮತ್ತೊಂದೆಡೆ ಸ್ಯಾಂಡಲ್ವುಡ್ ಕಲಾವಿದರ ಸಾವು ಕೂಡ ಕನ್ನಡ ಚಿತ್ರರಂಗಕ್ಕೆ ಭಾರೀ ಬೇಸರವನ್ನು ತರಿಸಿದೆ.
ಜೂನ್ 7 ರಂದು ‘ವಾಯುಪುತ್ರ’ ಸಿನಿಮಾ ಖ್ಯಾತಿಯ ನಟ ಚಿರಂಜೀವಿ ಸರ್ಜಾ ನಿಧನರಾದರು. ಇವರ ದಿಢೀರ್ ಸಾವಿಗೆ ಸ್ಯಾಂಡಲ್ವುಡ್ ತುಂಬಲಾರದ ನಷ್ಟವಾಗಿದೆ. 35ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ನಟನ ಬಗ್ಗೆ ಅನೇಕರು ಬೇಸರ ಹೊರಹಾಕಿದ್ದರು.
ಅದಕ್ಕೂ ಮೊದಲು ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶರಾಗಿದ್ದರು. ಮೇ 13ರಂದು ಮತ್ತೊಬ್ಬ ಹಾಸ್ಯ ನಟ ಮೈಕಲ್ ಮಧು ನಿಧನರಾದರು. ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್’ ರಿಯಾಲಿಟಿ ಶೋ ವಿಜೇತೆ ಮೆಬಿನಾ ಮೈಕಲ್ ಮೇ 26 ರಂದು ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದರು.
Comments are closed.