ಮನೋರಂಜನೆ

ವಂಚನೆ ಆರೋಪ- ದೂರು ದಾಖಲಾಗುತ್ತಿದ್ದಂತೆ ಸ್ಯಾಂಡಲ್‍ವುಡ್ ನಿರ್ದೇಶಕ ಪರಾರಿ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕನ ಮೇಲೆ ವಂಚನೆ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.

‘ಆರೆಂಜ್’, ‘ಲವ್ ಗುರು’ ಖ್ಯಾತಿಯ ಪ್ರಶಾಂತ್ ರಾಜ್ ಮೇಲೆ ಈ ಆರೋಪ ಕೇಳಿ ಬಂದಿದೆ. ದೂರದ ಸಂಬಂಧಿ ಗಿರಿಜಾ ಮತ್ತು ಚಿಕ್ಕ ವೀರಯ್ಯ ಎಂಬವರ ಮಗ ಕೇಸ್‍ ಒಂದರಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದನು. ಈ ವಿಚಾರ ತಿಳಿದ ನಿರ್ದೇಶಕ ಪ್ರಶಾಂತ್ ರಾಜ್ ಸಹೋದರ ನವೀನ್ ರಾಜ್, ಮಾವ ನಾಗರಾಜ್ ಚಿಕ್ಕವೀರಯ್ಯನ ಮನೆಗೆ ಹೋಗಿದ್ದರು. 20 ಲಕ್ಷ ಹಣ ನೀಡಿದ್ದರೆ ನಿನ್ನ ಮಗನನ್ನು ಪೊಲೀಸರಿಂದ ಬಿಡಿಸಿಕೊಂಡು ಬರುವುದಾಗಿ ಹೇಳಿದ್ದರು.
ನವೀನ್ ರಾಜ್ ಹಾಗೂ ನಾಗರಾಜ್

ಪ್ರಶಾಂತ್ ಮಾತು ನಂಬಿದ ದಂಪತಿ ಮೊದಲಿಗೆ 10 ಲಕ್ಷ ರೂ., 600 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದರು. ಇದಾದ ಕೆಲದಿನಗಳ ನಂತರ ಮತ್ತೆ ಮನೆಗೆ ಬಂದ ಪ್ರಶಾಂತ್ ಇನ್ನೂ 15 ಲಕ್ಷ ರೂ. ಬೇಕು ಕೊಡಿ ಎಂದು ಕೇಳಿದ್ದಾನೆ. ಇದರಿಂದ ಬೇಸತ್ತ ದಂಪತಿ ನಮ್ಮ ಹಣ ವಾಪಸ್ಸು ಕೊಡುವಂತೆ ಒತ್ತಾಯ ಮಾಡಿದ್ದಾರೆ. ದಂಪತಿಯ ಮಾತಿನಿಂದ ಕೋಪಗೊಂಡ ನಿರ್ದೇಶಕ ನಿಮ್ಮ ಮನೆ ಮೇಲೆ ಇಡಿ, ಐಟಿ ದಾಳಿ ಮಾಡಿಸ್ತೀನಿ. 15 ಲಕ್ಷ ರೂ. ಕೊಡದಿದ್ದರೆ ನಿಮ್ಮನ್ನು ಕೊಲೆ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಹಣ ನೀಡಿ ದಂಪತಿ ಎಚ್‍ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾದ ವಿಚಾರ ತಿಳಿದ ನಿರ್ದೇಶಕ ಪ್ರಶಾಂತ್ ರಾಜ್, ಸಹೋದರ ನವೀನ್ ರಾಜ್, ಮಾವ ನಾಗರಾಜ್ ಎಸ್ಕೇಪ್ ಆಗಿದ್ದಾರೆ.

Comments are closed.