ಮನೋರಂಜನೆ

ಗುಪ್ತಾಂಗ ಪದ ಬಳಕೆಯ ರಹಸ್ಯ ಬಿಚ್ಚಿಟ್ಟ ದೀಪಿಕಾ ದಾಸ್!!

Pinterest LinkedIn Tumblr


‘ಬಿಗ್‌ ಬಾಸ್ ಕನ್ನಡ ಸೀಸನ್‌ 7’ ರಿಯಾಲಿಟಿ ಶೋ ದಿನ ಕಳೆದಂತೆ ರೋಚಕತೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಇತ್ತೀಚಿಗೆ ನಡೆದ ಟಾಸ್ಕ್‌ವೊಂದು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಕದನಕ್ಕೆ ಕಾರಣವಾಗಿತ್ತು. ಅದೇನೆಂದರೆ, ಕಿತ್ತಳೆ ಹಣ್ಣು ಸಂಗ್ರಹಿಸುವ ಆಟ! ಅದರಲ್ಲಿ ದೀಪಿಕಾ ದಾಸ್ ಅವರಿಂದ ಬಂದ ‘ಗುಪ್ತಾಂಗವನ್ನು ಮುಟ್ಟುವ ಹಾಗಿಲ್ಲ’ ಎಂಬ ಮಾತಿನಿಂದ ದೊಡ್ಡ ಚರ್ಚೆಯೇ ಶುರುವಾಗಿತ್ತು. ಇದೀಗ ಅವರು ಹಾಗೇ ಹೇಳಿದ್ದೇಕೆ? ಇಲ್ಲಿದೆ ಉತ್ತರ!

ಇತ್ತೀಚಿಗೆ ‘ಕಿತ್ತಳೆ ಮಂಡಿ’ ಟಾಸ್ಕ್‌ ಸಪ್ತಾಶ್ವ ಹಾಗೂ ಸಿಡಿಲು ತಂಡದ ನಡುವೆ ನಡೆಯಿತು. ಈ ಟಾಸ್ಕ್‌ನಲ್ಲಿ ಕಿತ್ತಳೆ ಹಣ್ಣುಗಳನ್ನು ಮಹಿಳಾ ಸ್ಪರ್ಧಿಗಳು ತಮ್ಮ ಟೀ-ಶರ್ಟ್‌ನಲ್ಲಿ ಬಚ್ಚಿಟ್ಟುಕೊಂಡಿದ್ದರು. ‘ಹೆಣ್ಣು ಮಕ್ಕಳು ನೀವು ಆ ಜಾಗದಲ್ಲಿ ಬಚ್ಚಿಟ್ಟುಕೊಂಡು ಅಡ್ವಾಂಟೇಜ್ ತಗೊಳ್ತಿದ್ದೀರಾ’ ಎಂದು ಆರ್‌ಜೆ ಪೃಥ್ವಿ ಹೇಳಿದ್ದರು. ಕಡೆಗೆ ದೀಪಿಕಾ ತನ್ನ ಟೀ ಶರ್ಟ್ ಒಳಗೆ ಬಚ್ಚಿಟ್ಟುಕೊಂಡಿದ್ದ ಕಿತ್ತಳೆ ಹಣ್ಣನ್ನು ಕುರಿ ಪ್ರತಾಪ್ ಕಿತ್ತುಕೊಳ್ಳಲು ಹೋದಾಗ, ‘ಗುಪ್ತಾಂಗವನ್ನು ಮುಟ್ಟುವ ಹಾಗಿಲ್ಲ. ನಾವು ಹುಡುಗೀರು ಬಿಚ್ಚಿಕೊಂಡು ನಿಲ್ಲೋಕೆ ಬಂದಿಲ್ಲ ಇಲ್ಲಿ. ಟೀ-ಶರ್ಟ್ ಮುಟ್ಟಿದರೆ ನಾವು ಸುಮ್ಮನಿರಲ್ಲ. ಆ ರೀತಿ ಮಾಡಿದರೆ ನಮಗೆ ಈ ಆಟವೇ ಬೇಡ’ ಎಂದು ದೀಪಿಕಾ ಹೇಳಿದ್ದರು. ಆದರೆ, ಇಂದಿನ ಸಂಚಿಕೆಯಲ್ಲಿ ಈ ಕುರಿತ ಚರ್ಚೆ ಆಗಿದೆ.

ಇಂದಿನ ಸಂಚಿಕೆಯಲ್ಲಿ ಮನೆ ಕೆಲವೊಂದು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಅದರಲ್ಲಿ ಕಿತ್ತಳೆ ಹಣ್ಣಿನ ಸಂಗ್ರಹ ಕುರಿತು ಮತ್ತು ದೀಪಿಕಾ ಬಳಸಿದ ಮಾತಿನ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ. ‘ಹೆಣ್ಣನ್ನು ಮುಟ್ಟಲ್ಲ ಎನ್ನುವ ಕಾರಣಕ್ಕೆ ನೀವು ಶರ್ಟ್ ಒಳಗೆ ಹಣ್ಣನ್ನು ಹಾಕಿ ಇಟ್ಟುಕೊಂಡಿದ್ದು ಎಷ್ಟು ಸರಿ’ ಎಂದು ಹರೀಶ್ ರಾಜ್ ಕೇಳಿದ್ದಾರೆ. ಅದಕ್ಕೆ ದೀಪಿಕಾ ದಾಸ್‌, ‘ಟಾಸ್ಕ್ ಗೆಲ್ಲಲು ನಾವು ಮಾಡಿದ ಸ್ಟ್ರಾಟಜಿ (ಕಾರ್ಯತಂತ್ರ) ಅದಾಗಿತ್ತು’ ಎಂದಿದ್ದಾರೆ. ಸದ್ಯ ಇಂದಿನ ಸಂಚಿಕೆಯ ಈ ಪ್ರೋಮೋವನ್ನು ಕಲರ್ಸ್‌ ಕನ್ನಡ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ದೀಪಿಕಾ ಹೇಳಿರುವ ಮಾತಿಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.