ಮನೋರಂಜನೆ

ತನ್ನ ಕುರಿತು ಕೆಟ್ಟದಾಗಿ ಬರೆದಿದ್ದ ರವಿ ಬೆಳೆಗೆರೆ ಕುರಿತು ಇಂದು ದುನಿಯಾ ರಶ್ಮಿ ಹೇಳಿದ್ದೇನು ಗೊತ್ತಾ?

Pinterest LinkedIn Tumblr


ಬಿಗ್ ಬಾಸ್ ಕನ್ನಡದ ಈ ಸೀಸನ್ ನಲ್ಲಿ ವಿಭಿನ್ನವಾದ ಕ್ಯಾರೆಕ್ಟರ್ ಗಳು ಮನೆ ಒಳ ಹೊಕ್ಕಿರುವುದು ಎಲ್ಲರಿಗೂ ತಿಳಿದೇ ಇದೆ.

ಅದರಲ್ಲೂ ಪ್ರಖ್ಯಾತ ಲೇಖಕರಾದ ರವಿ ಬೆಳೆಗೆರೆ ಅವರು ಈಗಾಗಲೇ ತಮ್ಮ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಹಲವಾರು ಸೆಲಿಬ್ರೆಟಿಗಳ ಬಂಡವಾಳಗಳನ್ನು ಬಯಲು ಮಾಡಿರುವುದೂ ಸಹ ಗೊತ್ತಿರುವ ವಿಚಾರ.

ಅದೇ ರೀತಿಯಾಗಿ ಬಹಳಷ್ಟು ವರ್ಷಗಳ ಹಿಂದೆ ದುನಿಯಾ ಸಿನಿಮಾ ಬಿಡುಗಡೆಗೊಂಡ ನಂತರ ದುನಿಯಾ ಸಿನಿಮಾದ ನಾಯಕಿ ರಶ್ಮಿ ಅವರ ವ್ಯಯಕ್ತಿಕ ವಿಚಾರಗಳ ಬಗ್ಗೆ ಲೇಖನವೊಂದನ್ನು ಬರೆದಿದ್ದರು.. ಆನಂತರ ಆ ವಿಷಯ ಅಲ್ಲಿಗೆ ಮುಗಿದಿತ್ತು.

ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಲೇಖನ ಬರೆದ ರವಿ ಬೆಳೆಗೆರೆ ಅವರು ಹಾಗೂ ರಶ್ಮಿ ಅವರು ಇಬ್ಬರೂ ಒಟ್ಟಿಗೆ ಇದ್ದಾರೆ. ಮನೆಯಲ್ಲಿ ರವಿ ಬೆಳೆಗೆರೆ ಅವರ ಆರೋಗ್ಯ ಕೆಟ್ಟು ಆಂಬುಕೆನ್ಸ್ ಬೇಕು ಎಂದು ಕೇಳಿಕೊಂಡು ಮನೆಯಿಂದ ಹೊರ ಹೋಗಿ ಚಿಕಿತ್ಸೆ ಪಡೆಯುವ ಸಮಯದಲ್ಲಿ ರಶ್ಮಿ ಅವರು ಚಂದನ್ ಆಚಾರ್ ಅವರ ಬಳಿ ರವಿ ಬೆಳೆಗೆರೆ ಅವರ ಬಗ್ಗೆ ಮಾತನಾಡಿದ್ದಾರೆ.

ಆದರೆ ಅವರು ಮಾತನಾಡಿದ್ದು ನಿಜಕ್ಕೂ ಪ್ರೇಕ್ಷಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಹೌಧ್ ರಶ್ಮಿ ಅವರು ಒಂದು ಚೂರು ಕೋಪವಿಲ್ಲದೆ ರವಿ ಬೆಳೆಗೆರೆ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.. “ರವಿ ಬೆಳೆಗೆರೆ ಅವರು ಎಷ್ಟೆಲ್ಲಾ ತಿಳಿದುಕೊಂಡಿದ್ದಾರೆ ಅಲ್ವಾ..

ನಿಜಕ್ಕೂ ಅವರನ್ನು ನೋಡಿದರೆ ಅವರ ಬಳಿ‌ ಕಲಿಯುವುದು ಬಹಳಷ್ಟಿದೆ ಎನಿಸುತ್ತದೆ. ಅವರ ನೆನಪಿನ ಶಕ್ತಿ ಎಷ್ಟಿದೆ.. ದುನಿಯಾ ಸಿನಿಮಾ ಬಿಡುಗಡೆ ಆದಾಗ ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ ಎಲ್ಲಾ ಬರೆದಿದ್ದರು.. ಆಗ ನಾನು ಇವರನ್ನು ಬೈದುಕೊಂಡಿದ್ದೆ.. ಯಾಕ್ ಈತರ ಬರಿತಾರೆ ಅಂತ.. ಆದರೆ ಈಗ ಇವರ ಜೊತೆ ಇದ್ದಾಗ ಇವರ ಬಗ್ಗೆ ತಿಳಿಯುತ್ತಿದೆ..” ಎಂದಿದ್ದಾರೆ.

ಕಾಲದ ಮುಂದೆ ಯಾರೂ ದೊಡ್ಡವರಲ್ಲ.. ಒಮ್ಮೆ ಕೆಟ್ಟವರು ಒಮ್ಮೆ ಒಳ್ಳೆಯವರು.. ಎಲ್ಲದಕ್ಕಿಂತ ದೊಡ್ಡದು ಸಂದರ್ಭವಷ್ಟೇ‌‌‌‌. ಅಂದು ರಶ್ಮಿ ಬಗ್ಗೆ ಬರೆದಿದ್ದ ಅದೇ ರವಿ ಬೆಳೆಗೆರೆ ಇಂದು ಹುಷಾರು ತಪ್ಪಿದಾಗ ಅದೇ ಮನಸ್ಸು ಮರುಗಿತು.. ಮನುಷ್ಯತ್ವದ ಮುಂದೆ ಮನುಷ್ಯ ಬಹಳ ಸಣ್ಣವನು ಎಂಬುದು ಇಲ್ಲಿ ಅರ್ಥವಾಗುತ್ತದೆ..

Comments are closed.