ಮನೋರಂಜನೆ

ಬಿಗ್​ಹೌಸ್​ ಮನೆಯಲ್ಲಿ ಶಂಕರ್​ನಾಗ್​-ಮಂಜುಳಾ ದುರಂತದ ಕತೆ ಹೇಳಿದ ರವಿ ಬೆಳಗೆರೆ…

Pinterest LinkedIn Tumblr


ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್​ಬಾಸ್​ ಮನೆಯಲ್ಲಿರುವುದು ಈ ಶನಿವಾರದವರೆಗೆ ಮಾತ್ರ. ಅತಿಥಿಯಾಗಿರುವ ಅವರು ಯಾವುದೇ ಟಾಸ್ಕ್​ಗಳಲ್ಲಿ ಪಾಲ್ಗೊಳ್ಳದಿದ್ದರೂ ಉಳಿದ ಸ್ಪರ್ಧಿಗಳ ಜತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಚಲನಚಿತ್ರ ಕ್ಷೇತ್ರದ ಹಳೇ ಕಲಾವಿದರ ಬಗೆಗಿನ ಕುತೂಹಲಕಾರಿ, ಆಸಕ್ತಿದಾಯಕ ವಿಷಯಗಳನ್ನು ತಿಳಿಸಿಕೊಡುತ್ತಿದ್ದಾರೆ. ಮೊನ್ನೆ ನಟ ದಿನೇಶ್​ ಅವರ ನಿಜಜೀವನದ ಹಾಸ್ಯ ಘಟನೆಗಳನ್ನು ಹೇಳಿ ಇಡೀ ಬಿಗ್​ಬಾಸ್​ ಮನೆಯನ್ನು ನಗೆಗಡಲಿನಲ್ಲಿ ತೇಲಿಸಿದ್ದರು.

ಇದೀಗ ಕಲರ್ಸ್​ ಕನ್ನಡ ಪೋಸ್ಟ್ ಮಾಡಿರುವ ಹೊಸ ಪ್ರೊಮೋ ಒಂದರಲ್ಲಿ ರವಿ ಬೆಳಗೆರೆಯವರು ನಟ ಶಂಕರ್​ನಾಗ್​ ಹಾಗೂ ನಟಿ ಮಂಜುಳಾ ಅವರಿಗೆ ಸಂಬಂಧಪಟ್ಟ ದುರಂತದ ವಿಷಯವನ್ನು ತಿಳಿಸಿದ್ದಾರೆ. ಕಾಫಿ ಕುಡಿಯುತ್ತ ಅವರು ಹೇಳಿದ ಕತೆ ಕೇಳಿ ಉಳಿದ ಸ್ಪರ್ಧಿಗಳು ಹೌದಾ? ಎಂದು ಆಶ್ಚರ್ಯಚಕಿತರಾಗಿ ಕೇಳಿದ್ದನ್ನು ವಿಡಿಯೋ ತುಣುಕಲ್ಲಿ ನೋಡಬಹುದು.

ನಟಿ ಮಂಜುಳಾ ಅವರ ಎದುರು ಮೊದಲ ಬಾರಿ ಶಂಕರ್​​ನಾಗ್​ ಅವರನ್ನು ಕರೆದುಕೊಂಡು ಬಂದು ಇವರೇ ನಿಮ್ಮ ಸಿನಿಮಾದ ಹೀರೋ ಎಂದು ಪರಿಚಯಿಸಿದಾಗ, ಯಾವ್ಯಾವುದೋ ಕೋತಿಯನ್ನೆಲ್ಲ ಕರೆದುಕೊಂಡು ಬಂದು ಹೀರೋ ಎನ್ನುತ್ತೀರಿ ಎಂದು ಮಂಜುಳಾ ಶಂಕರ್​ನಾಗ್​ ಎದುರೇ ಹೇಳಿದರು. ಆದರೆ ದುರಂತವೆಂದರೆ ಮಂಜುಳಾ ಬೆಂಕಿ ಅನಾಹುತದಲ್ಲಿ ಮೃತಪಟ್ಟಾಗ ಅವರ ಮೃತದೇಹವನ್ನು ತಂದಿದ್ದೇ ಶಂಕರ್​ನಾಗ್​ ಎಂದು ರವಿ ಬೆಳಗೆರೆಯವರು ಹಳೇ ದಿನಗಳನ್ನು ನೆನಪಿಸಿಕೊಂಡರು.

Comments are closed.