ಮನೋರಂಜನೆ

ರಶ್ಮಿಕಾ ಮಂದಣ್ಣರ ಈ ‘ಬಿಗ್‌ ಬಜೆಟ್’ ಚಿತ್ರ ಶುರುವಾಗುವ ಲಕ್ಷಣವೇ ಇಲ್ಲ!!

Pinterest LinkedIn Tumblr


ನಟಿ ರಶ್ಮಿಕಾ ಮಂದಣ್ಣ ಕನ್ನಡಕ್ಕಿಂತಲೂ ತೆಲುಗಿನಲ್ಲಿ ಸಿಕ್ಕಾಪಟ್ಟೆ ಫೇಮಸ್ಸು. ಒಂದರ ಹಿಂದೊಂದು ಸ್ಟಾರ್ ನಟರ ಸಿನಿಮಾಗಳು ಅವರು ಖಾತೆಯಲ್ಲಿವೆ. ವಿಜಯ್ ದೇವರಕೊಂಡ ಜತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ಈ ಚೆಲುವೆ, ಈಗ ಮಹೇಶ್‌ ಬಾಬು ಚಿತ್ರಕ್ಕೂ ನಾಯಕಿ. ಇದೆಲ್ಲದರ ಮಧ್ಯೆ ಟಾಲಿವುಡ್ ಸ್ಟಾರ್ ನಟರೊಬ್ಬರ ಸಿನಿಮಾಕ್ಕೂ ಅವರು ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ, ಆ ಸಿನಿಮಾ ಮಾತ್ರ ಯಾಕೋ ಶುರುವಾಗುವ ಲಕ್ಷಣವೇ ಇಲ್ಲ!!

ಹೌದು, ವಿಜಯ್‌, ಮಹೇಶ್ ಬಾಬು ನಂತರ ಅಲ್ಲು ಅರ್ಜುನ್ ನಟನೆಯ ಸಿನಿಮಾಗೆ ರಶ್ಮಿಕಾ ಸೆಲೆಕ್ಟ್ ಆಗಿದ್ದರು. ಅದ್ಯಾಕೋ ಆ ಸಿನಿಮಾ ಸೆಟ್ಟೇರುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ‘ನಾ ಪೇರು ಸೂರ್ಯ’ ಚಿತ್ರದ ಸೋಲಿನ ನಂತರ ಅಲ್ಲು ಅರ್ಜುನ್‌ ಸಿಕ್ಕಾಪಟ್ಟೆ ಅಳೆದು ತೂಗಿ ಕಥೆ ಫೈನಲ್‌ ಮಾಡುತ್ತಿದ್ದಾರೆ. ಈಗಾಗಲೇ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜತೆಗಿನ ‘ಅಲಾ ವೆಂಕಟಪುರಂಲೋ’ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿದ್ದಾರೆ. ಆನಂತರ ಅವರು ನಿರ್ದೇಶಕ ಸುಕುಮಾರ್ ಜತೆಗೆ ಕೆಲಸ ಮಾಡುಬೇಕಿತ್ತು. ಅದೇ ಸಿನಿಮಾಗೆ ರಶ್ಮಿಕಾ ಆಯ್ಕೆಯಾಗಿರುವುದು.

ಮೂಲಗಳ ಪ್ರಕಾರ, ಸುಕುಮಾರ್ ಬರೆದಿರುವ ಚಿತ್ರಕಥೆ ಅಲ್ಲು ಅರ್ಜುನ್‌ಗೆ ಹಿಡಿಸುತ್ತಿಲ್ಲವಂತೆ. ಸೆಕೆಂಡ್‌ ಹಾಫ್‌ನಲ್ಲಿ ಸಾಕಷ್ಟು ಬದಲಾವಣೆಗೆ ಅವರು ಸೂಚಿಸುತ್ತಿದ್ದಾರಂತೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಸಾಕಷ್ಟು ಚರ್ಚೆಗಳು ಏರ್ಪಟ್ಟಿವೆ ಎನ್ನಲಾಗಿದೆ. ಈಗಾಗಲೇ ಅನೇಕ ಬಾರಿ ಸಿನಿಮಾದ ಮುಹೂರ್ತ ಮುಂದೂಡಿಕೆ ಆಗುತ್ತಿದೆ. ವಿಜಯ ದಶಮಿಗೆ ಸಿನಿಮಾ ಸೆಟ್ಟೇರಲಿದೆ ಎಂಬುದು ಬಹುತೇಕ ಖಚಿತವಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

‘ರಂಗಸ್ಥಲಂ’ ನಂತರ ಮತ್ತೊಮ್ಮೆ ಹಳ್ಳಿ ಕಡೆ ಮುಖ ಮಾಡಿರುವ ನಿರ್ದೇಶಕ ಸುಕುಮಾರ್ ಈ ಬಾರಿ ರಶ್ಮಿಕಾಗೆ ಹಳ್ಳಿ ಹುಡುಗಿ ಪಾತ್ರ ನೀಡಲಿದ್ದಾರಂತೆ. ಅಲ್ಲು ಅರ್ಜುನ್‌ ವೃತ್ತಿ ಜೀವನಕ್ಕೆ ‘ಆರ್ಯ’ದಂತಹ ಹಿಟ್ ಸಿನಿಮಾ ನೀಡಿದ್ದ ಸುಕುಮಾರ್, ಈ ಬಾರಿ ಮತ್ತೊಂದು ಅಂಥದ್ದೇ ಹಿಟ್‌ ಸಿನಿಮಾ ನೀಡಲಿ, ಆದಷ್ಟು ಬೇಗ ಸಿನಿಮಾ ಆರಂಭಿಸಲಿ ಎಂಬುದು ಅಭಿಮಾನಿಗಳ ನಿರೀಕ್ಷೆ.

Comments are closed.