ಮನೋರಂಜನೆ

ನಿರ್ದೇಶಕರ ವಿರುದ್ಧ ಫುಲ್​ ಗರಂ ಆದ ನಟಿ ಶಾನ್ವಿ ಶ್ರೀವಾಸ್ತವ್

Pinterest LinkedIn Tumblr


ಸ್ಯಾಂಡಲ್ ವುಡ್ ನಲ್ಲಿ ಚಂದ್ರಲೇಖಾ’, ‘ಮಾಸ್ಟರ್​ಪೀಸ್’​, ‘ತಾರಕ್’​, ‘ಸುಂದರಾಂಗ ಜಾಣ’ ಸಿನಿಮಾಗಳಲ್ಲಿ ನಟಿಸಿದ ನಟಿ ಮುದ್ದು ಮುಖದ ಶಾನ್ವಿ ಶ್ರೀವಾಸ್ತವ್ ಇತ್ತೀಚಿಗೆ ಯಾಕೋ ಫುಲ್​ ಗರಂ ಆಗಿದ್ದಾರೆ.

ನಿರ್ದೇಶಕರೊಬ್ಬರ ವಿರುದ್ಧ ಅಸಮಾಧಾನಗೊಂಡಿದ್ದು, ಅವರು ಹೇಳೋದೊಂದು, ಮಾಡೋದೊಂದು ಎಂದು ಟ್ವೀಟ್ ಮೂಲಕ ಶಾನ್ವಿ ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ಸಮಾಜಿಕ ಜಾಲತಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಶಾನ್ವಿ ಶ್ರೀವಾಸ್ತವ್ ಪ್ರತಿಯೊಬ್ಬ ಕಲಾವಿದನೂ ಸಿನಿಮಾದ ಭಾಗ. ಪ್ರಾಮಾಣಿಕವಾಗಿ ಅವರನ್ನು ಅಪ್ರೋಚ್‌ ಮಾಡಬೇಕಿದೆ. ಸ್ಕ್ರೀನ್‌ ಮೇಲೆ ಯಾವ ರೀತಿ ಮೂಡಿಬರಬೇಕು ಎಂದು ಇರುತ್ತದೆಯೋ ಅದೇ ರೀತಿ ಸ್ಕ್ರಿಪ್ಟ್ ನಿರೂಪಣೆ ಇರಬೇಕು. ಬದಲಾವಣೆ ಏನಾದರೂ ಮಾಡಿಕೊಂಡರೆ ಅದನ್ನು ನಟರಿಗೆ ತಿಳಿಸಬೇಕು. ಬದಲಾವಣೆ ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಸಿನಿಮಾದಲ್ಲಿ ಅದರ ಅಗತ್ಯತೆಯನ್ನು ನಟ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದನ್ನು ಸಿನಿಮಾಗಾಗಿ ಗೌರವಿಸುತ್ತಾರೆ.

ನಟರನ್ನು ದಿಕ್ಕುತಪ್ಪಿಸುವುದು ನೀತಿ ಬಾಹಿರ. ಅಲ್ಲದೆ, ಸುಳ್ಳು ಆಶ್ವಾಸನೆಗಳು, ಯಾವುದೇ ರೀತಿಯ ಸಮಜಾಯಿಷಿಗೆ ಪ್ರಯತ್ನಿಸುವುದು, ವೃತ್ತಿಪರತೆ ಇಲ್ಲದಿರುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಒಪ್ಪಬಾರದು ಕೂಡ. ಒಳಿತಾಗಲಿ ಅಂತಲೇ ಎಲ್ರೂ ಒಳ್ಳೆ ಪ್ರಯತ್ನ ಮಾಡೋಣ’ ಅಂತಾ ಟ್ವೀಟ್‌ ಮಾಡಿದ್ದಾರೆ.

ಇನ್ನು ಶಾನ್ವಿ ಯಾವ ಸಿನಿಮಾ ನಿರ್ದೇಶಕರ ಬಗ್ಗೆ ಈ ರೀತಿ ಕಿಡಿಕಾರಿದ್ದಾರೆ ಎಂದು ಸ್ಪಷ್ಟನೆ ನೀಡಿಲ್ಲ. ಕಳೆದ ವಾರವಷ್ಟೇ ‘ಗೀತಾ’ ಚಿತ್ರ ತೆರೆಕಂಡಿತ್ತು, ಆ ಚಿತ್ರದ ನಿರ್ದೇಶಕರ ಅಥವಾ ರಿಲೀಸ್​ಗೆ ರೆಡಿಯಾಗಿರುವ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕರ ಬಗ್ಗೆ ಹೇಳಿದ್ದಾರಾ? ಎಂದು ಅರ್ಥವಾಗುತ್ತಿಲ್ಲ. ಶಾನ್ವಿ ಅವರ ಈ ಟ್ವಿಟರ್​ ಪೋಸ್ಟ್​ ಸದ್ಯ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದು, ಸ್ಯಾಂಡಲ್​ವುಡ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

Comments are closed.