ಬಾಲಿವುಡ್ನ ಚೆಂದುಳ್ಳಿ ಚೆಲುವೆ ದಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿರುವುದು ಕೆಲ ದಿನಗಳ ಹಿಂದೆಯಷ್ಟೇ ಭಾರೀ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ಬಹಿರಂಗ ಪಡಿಸಿದ್ದ ನಟಿ ದಿಯಾ, ತಾನು ಪತಿ ಸಾಹಿಲ್ರಿಂದ ವಿಚ್ಛೇದನ ಹೊಂದುತ್ತಿರುವುದಾಗಿ ತಿಳಿಸಿದ್ದರು.
ಇದೇ ವೇಳೆ 11 ವರ್ಷಗಳ ದಾಂಪತ್ಯ ಜೀವನಕ್ಕೆ ಏಕಾಏಕಿ ಇತಿಶ್ರೀ ಹಾಡಲು ಕಾರಣವೇನು ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಈ ಪ್ರಶ್ನೆಗಳಿಗೆ ಉತ್ತರಗಳು ಇದೀಗ ಕೇಳಿ ಬರುತ್ತಿದೆ. ದಿಯಾ ಮಿರ್ಜಾರನ್ನು ಪ್ರೀತಿಸಿ ಮದುವೆಯಾಗಿದ್ದ ಸಾಹಿಲ್ಗೆ ಇತ್ತೀಚಿನ ದಿನಗಳಲ್ಲಿ ಬೇರೊಂದು ಆಫೇರ್ ಕವಲೊಡೆದಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಪತಿಯಿಂದ ದೂರ ಸರಿಯಲು ಬಿಟೌನ್ ಚೆಲುವೆ ನಿರ್ಧರಿಸಿದ್ದರು ಎಂದು ವರದಿಯೊಂದು ಹೇಳಿದೆ.
ದಿಯಾ ಬಾಳಿಗೆ ಮುಳ್ಳಾದ ಮಹಿಳೆ ಕೂಡ ಚಿತ್ರರಂಗದಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ಬಾಲಿವುಡ್ ಚಿತ್ರಗಳ ಕಥೆಗಾರ್ತಿ ಎಂದು ಹೇಳಲಾಗಿದೆ. ಇನ್ನು ಕಂಗನಾ ರಾಣವತ್ ಅಭಿನಯದ ‘ಜಡ್ಜ್ಮೆಂಟಲ್ ಹೆ ಕ್ಯಾ’ ಚಿತ್ರದ ಕಥೆಗಾರ್ತಿ ಕನಿಕಾ ದಿಲ್ಲಾನ್ ಅವರ ಹೆಸರು ಕೂಡ ಸಾಹಿಲ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಇದಕ್ಕೆ ಮತ್ತೊಂದು ಕಾರಣ ಕನಿಕಾ ಕೂಡ ಪತಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿರುವುದು.
ಹೀಗಾಗಿ ದಿಯಾ ಮಿರ್ಜಾ ಅವರ ಪ್ರೇಮಗೀತೆಗೆ ಕಥೆಗಾರ್ತಿ ಪುಲಿಸ್ಟಾಪ್ ಹಾಕಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ದಿಯಾ ಮಿರ್ಜಾ, ನಮ್ಮಿಬ್ಬರ ವಿಚ್ಛೇದನಕ್ಕೆ ಯಾರೊಬ್ಬರು ಕಾರಣರಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕಪೋಕಲ್ಪಿತ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಆದರೂ ಬಾಲಿವುಡ್ ಕಡಲ ಕಿನಾರೆಯಲ್ಲಿ ಸಾಹಿಲ್-ದಿಯಾ ಬಾಳಿಗೆ ಕೊಲ್ಲಿಯಿಟ್ಟ ಕನಿಕಾ ಎಂಬ ಗುಸು ಗುಸು ಪಿಸು ಪಿಸುಗಳು ಮಾತ್ರ ಕೇಳಿ ಬರುತ್ತಿವೆ.
2014 ಅಕ್ಟೋಬರ್ 18ರಂದು ಇಬ್ಬರೂ ವಿವಾಹವಾಗಿದ್ದ ಸಾಹಿಲ್-ದಿಯಾ ಜೋಡಿ ಆಗಸ್ಟ್ 1ರಂದು ಬೇರೆಯಾಗಲು ತೀರ್ಮಾನಿಸಿದ್ದರು. ಈ ವೇಳೆ “ನಾವು ವಿಚ್ಛೇದನ ಪಡೆದುಕೊಂಡಿದ್ದರೂ ಗೆಳೆಯರಾಗಿರುತ್ತೇವೆ. ನಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿದೆ. ನಾವು ಅನಿವಾರ್ಯವಾಗಿ ಬೇರೆ ಮಾರ್ಗ ತುಳಿಯಬೇಕಿದೆ. ನಿರಂತರವಾಗಿ ಪ್ರೀತಿ ಹಾಗೂ ಬೆಂಬಲ ತೋರಿಸುತ್ತಿರುವ ಕುಟುಂಬ, ಗೆಳೆಯರು ಹಾಗೂ ಮಾಧ್ಯಮದವರಿಗೆ ಧನ್ಯವಾದ,” ಎಂದು ತಿಳಿಸಿದ್ದರು.
Comments are closed.