ಮನೋರಂಜನೆ

ಇದನ್ನು ನೋಡದೇ ಹೋದರೆ ನೀವು ‘ಕಚಡಾ ಲೋಫರ್​​ ನನ್ ಮಕ್ಳು..’ !!

Pinterest LinkedIn Tumblr


ಈ ಸಿನಿಮಾ ನೋಡದೆ ಇದ್ರೆ ನೀವು ಆಗ್ತೀರಿ ‘ಕಚಡಾ ಲೋಪರ್​​ ನನ್ ಮಕ್ಳು..’ ಈ ಮಾತು ನಾವ್​ ಹೇಳಿದ್ದಲ್ಲ… ‘ರಂಗಿ’ನಾಟಕ ಆಡಿದ ಭಂಡಾರಿ ಬ್ರದರ್ಸ್​ ಹೇಳಿದ್ದ ಮಾತು. ಹಾಗಾಗಿ ನೀವು ಎಷ್ಟೇ ಬ್ಯುಸಿ ಇದ್ರು ಆದಿ ಲಕ್ಷ್ಮೀ ಪುರಾಣ ಸಿನಿಮಾವನ್ನು ಒಮ್ಮೆ ನೋಡ್ಬಿಡಿ. ಇಲ್ಲದಿದ್ರೆ ನೀವು ‘ಕಚಡಾ ಲೋಫರ್​​ ನನ್ ಮಕ್ಳು’ ಆಗ್ತೀರಿ!!! ಬಹುಶ: ವಿವಾದ ನಿಮಗೂ ನೆನಪಿರುತ್ತೆ. ರಂಗಿತರಂಗ ಸಿನಿಮಾದ ಬಳಿಕ ಅನೂಪ್​ ಭಂಡಾರಿ ಮತ್ತು ನಿರೂಪ್​​ ಭಂಡಾರಿ ರಾಜರಥ ಸಿನಿಮಾ ಕೈಗೆತ್ತಿಕೊಂಡಿದ್ರು. ಚಿತ್ರದ ಪ್ರಮೋಶನ್​​​ಗಾಗಿ RJ Rapid ರಶ್ಮಿ ಶೋನಲ್ಲಿ ಫಿಲ್ಟರ್​ ಇಲ್ಲದೆ ಮತನಾಡಿ ಕನ್ನಡ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ರು.

‘ರಾಜರಥ’ ಸಿನಿಮಾ ಬಿಡುಗಡೆಗೂ ಮುನ್ನ RJ Rapid ರಶ್ಮಿ ನಿರೂಪಣೆಯ ಶೋನಲ್ಲಿ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಹಾಗೂ ಅವಂತಿಕಾ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ”ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ——-‘ ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ RJ Rapid ರಶ್ಮಿ ಪ್ರಶ್ನಿಸಿದರು. ಹೇಳಿ ಕೇಳಿ ಅದು ಫಿಲ್ಟರ್ ಇಲ್ಲದ ಶೋ. ಹೀಗಾಗಿ ಸಿನಿಮಾದ ಡೈರೆಕ್ಟರ್​​ ಅನೂಪ್​​ ಭಂಡಾರಿ ”ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ‘ಕಚಡಾ ನನ್ ಮಕ್ಳು..’ ಅಂದ್ರಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಚಿತ್ರದ ನಾಯಕ ನಿರೂಪ್​​ ಭಂಡಾರಿ ‘ಕಚಡಾ ಲೋಫರ್​​ ನನ್ ಮಕ್ಳು..’ ಅಂದ್ರು. ಅಣ್ಣ ಹೇಳಿದ್ದಕ್ಕೆ ಲೋಫರ್​ ಸೇರಿಸಿ ಕನ್ನಡ ಪ್ರೇಕ್ಷರಿಗೆ ಬೈದಿದ್ರು.

ಕಾರ್ಯಕ್ರಮದ ಈ ತುಣುಕು ಇದ್ದಕ್ಕಿದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ವರನಟ ರಾಜ್​​ಕುಮಾರ್​ ಅಭಿಮಾನಿಗಳನ್ನು ದೇವರು ಅಂತ ಕೆರದ ನೆಲ ಇದು. ಹೀಗಾಗಿ ಭಂಡಾರಿ ಬ್ರದರ್ಸ್​ ಮಾತು ಕನ್ನಡ ಪ್ರೇಕ್ಷಕರಿಗೆ ಹರ್ಟ್​ ಮಾಡಿದೆ. ಹೀಗಾಗಿ ಭಂಡಾರಿ ಬ್ರದರ್ಸ್​ ಆಡಿದ ಅಹಂಕಾರದ ಮಾತನ್ನು ಕೇಳಿ ಕನ್ನಡ ಸಿನಿ ಪ್ರೇಕ್ಷಕರು ಅಕ್ಷರಶ: ಕೆಂಡವಾದ್ರು. ಭಂಡಾರಿ ಸಹೋದರರಿಗೆ ಸೋಷಿಯಲ್ ಮೀಡಿಯಾದಲ್ಲಿ ಮಹಾ ಮಂಗಳಾರತಿಯೇ ನೆಡೆದುಹೋಯ್ತು. ಒಂದು ವೇಳೆ ಅವರು ಅವತ್ತು ಕನ್ನಡಿಗರ ಕೈಗೆ ಸಿಕ್ಕಿಬೇಳುತ್ತಿದ್ರೆ ಕಥೆಯೇ ಬೇರೆ ಆಗ್ತಿತ್ತು.

‘ಬಾಹಬಲಿ’ ಸಿನಿಮಾದ ಮುಂದೆ ಅವತ್ತಿಗೆ ಹೊಸಮುಖಗಳೇ ಇದ್ದ ‘ರಂಗಿತರಂಗ’ ಸಿನಿಮಾವನ್ನು ಗೆಲ್ಲಿಸಿದ್ದಿ ಇದೇ ಕನ್ನಡಿಗರು. ಆದ್ರೆ ರಾಜರಥ ಸಿನಿಮಾದ ಹೊತ್ತಿಗೆ ಅಹಂಕಾರ ಅವ್ರ ತೆಲೆಗೆ ಏರಿತ್ತು. ಹೀಗಾಗಿ ಹತ್ತಿದ ಏಣಿಯನ್ನೇ ಒದೆಯೋ ಜಾಯಮಾನದ ಭಂಡಾರಿ ಬ್ರದರ್ಸ್​ ಕನ್ನಡ ಪ್ರೇಕ್ಷಕರನ್ನು ‘ಕಚಡಾ ಲೋಫರ್​​ ನನ್ ಮಕ್ಳು..’ ಅಂದ್ರು. ಅದ್ರ ಪರಿಣಾಮ ಎಷ್ಟಿತ್ತೆಂದ್ರೆ ರಾಜರಥ ಅಟ್ಟರ್​ ಫ್ಲಾಪ್​ ಆಗಿತ್ತು. ಫಸ್ಟ್​​ ಡೇ ಮಾರ್ನಿಂಗ್​ ಶೋದಿಂದ್ಲೇ ಥಿಯೇಟರ್​​ನಲ್ಲಿ ನೊಣ ಹೊಡೆಯುವಂತಾಗಿತ್ತು. ಆ ಮೂಲಕ ಕನ್ನಡ ಪ್ರೇಕ್ಷಕರು ಭಂಡಾರಿ ಬ್ರದರ್ಸ್​ಗೆ ಪಾಠ ಕಲಿಸಿದ್ರು.

ಕನ್ನಡ ಪ್ರೇಕ್ಷಕರನ್ನು ‘ಕಚಡಾ ಲೋಪರ್​​ ನನ್ ಮಕ್ಳು..’ ಅಂದಿದ್ದ ಭಂಡಾರಿ ಬ್ರದರ್ಸ್​ ಈಗ ಮತ್ತೊಮ್ಮೆ ಬಂದಿದ್ದಾರೆ. ಅದು ಆದಿಲಕ್ಷ್ಮಿ ಪುರಾಣ ಸಿನಿಮಾದಲ್ಲಿ. ನಿರೂಪ್​​ ಭಂಡಾರಿ ಈ ಸಿನಿಮಾದಲ್ಲಿ ಹೀರೋ.., ಬ್ರದರ್​ ಅನೂಪ್​​ ಭಂಡಾರಿ ಮ್ಯೂಸಿಕ್​ ಡೈರೆಕ್ಟರ್​​. ಆದ್ರೆ ಕನ್ನಡದ ಪ್ರೇಕ್ಷಕರನ್ನು ‘ಕಚಡಾ ನನ್ ಮಕ್ಳು..’, ‘ಕಚಡಾ ಲೋಫರ್​​ ನನ್ ಮಕ್ಳು..’ ಅಂದಿದ್ದ ಈ ಅಣ್ತಮ್ಮನ ‘ಪುರಾಣ’ವನ್ನು ಪ್ರೇಕ್ಷಕರು ಇನ್ನೂ ಮರೆತಿಲ್ಲ. ಅದು ಮರೆಯೋಕೆ ಸಾಧ್ಯವೂ ಇಲ್ಲ.

ಇದೀಗ ಅಣ್ತಮ್ಮ ಇಬ್ಬರೂ ಹೊಸ ‘ಪುರಾಣ’ ಹೇಳೋಕೆ ರೆಡಿಯಾಗಿದ್ದಾರೆ. ಆದ್ರೆ ಸ್ವಾಭಿಮಾನಿ ಕನ್ನಡದ ಪ್ರೇಕ್ಷಕ ತನ್ನ ನೋವನ್ನು ಅಷ್ಟು ಸುಲಭವಾಗಿ ಮರೆಯಲಾರ. ಹೀಗಾಗಿ ಪ್ರೇಕ್ಷರನ್ನು ಬೈದ ನಟನ ಮತ್ತು ಸಂಗೀತ ನಿರ್ದೇಶಕನ ಸಿನಿಮಾವನ್ನು ನೋಡಬೇಕಾ ಅನ್ನೋದು ಪ್ರೇಕ್ಷಕರ ಪಶ್ನೆ. ಈ ಬಗ್ಗೆ ಶೋಷಿಯಲ್​​ ಮೀಡಿಯಾದಲ್ಲಿ ಪ್ರೇಕ್ಷಕರು ಮತ್ತೊಮ್ಮೆ ಅಭಿಯಾನ ಶುರುಮಾಡಿದ್ದಾರೆ. ಈ ಸಿನಿಮಾ ನೋಡದೆ ಇದ್ರೆ ನಾವ್​ ‘ಕಚಡಾ ಲೋಪರ್​​ ನನ್ ಮಕ್ಳು..’ ಆಗ್ತೀವಾ ಅಂತ ಪಶ್ನಿಸ್ತಿದ್ದಾರೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಕೂಡ ‘ಆದಿಲಕ್ಷ್ಮೀ ಪುರಾಣ’ ಸಿನಿಮಾವನ್ನು ಧಿಕ್ಕರಿಸಲು ಕೆರೆನೀಡಿದೆ. ಯಾಕಂದ್ರೆ ಎಷ್ಟೇ ಹೊಸ ‘ಪುರಾಣ’ ಸೃಷ್ಟಿಸಿದ್ರು ಹಳೇ ‘ಪುರಾಣ’ ಮರೆಯುವಂಥದಲ್ಲ ಅಲ್ವಾ..?!

Comments are closed.