ಮನೋರಂಜನೆ

ಕೃಷ್ಣಮೃಗ ಬೇಟೆ ಪ್ರಕರಣ: ಟಬು, ಸೋನಾಲಿ ಬೇಂದ್ರೆ, ಸೈಫ್ ಅಲಿಖಾನ್​ಗೆ ಹೊಸ ನೋಟಿಸ್..!

Pinterest LinkedIn Tumblr


ಜೋಧ್​ಪುರ್(ರಾಜಸ್ತಾನ್​)​: ಬಾಲಿವುಡ್​ ನಟ ಸಲ್ಮಾನ್​ ಖಾನ್​ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೈಫ್ ಅಲಿಖಾನ್ ಹಾಗೂ ನಟಿಯರಾದ ಸೋನಾಲಿ ಬೇಂದ್ರೆ, ನೀಲಂ ಕೊಠಾರಿ, ಟಬುಗೆ ರಾಜಸ್ಥಾನ ಹೈಕೋರ್ಟಿನ ಜೋಧ್ಪುರ್​ ಪೀಠ ಮತ್ತೊಮ್ಮೆ ಹೊಸದಾಗಿ ನೋಟಿಸ್ ಜಾರಿ ಮಾಡಿದೆ. 1998, ಅಕ್ಟೋಬರ್ 2ರಂದು ಜೋಧ್ಪುರ​ನಲ್ಲಿ ‘ಹಮ್ ಸಾಥ್ ಸಾಥ್ ಹೈಂ’ ಸಿನಿಮಾದ ಚಿತ್ರೀಕರಣದ ವೇಳೆ ಕೃಷ್ಣಮೃಗ ಬೇಟೆ ಆಡಿದ ಆರೋಪ ಕೇಳಿ ಬಂದಿತ್ತು.

ಪ್ರಕರಣ ಸಂಬಂಧ ಈಗ ನೋಟಿಸ್​ ನೀಡಲಾಗಿರುವ ಐವರನ್ನೂ ದೋಷಮುಕ್ತಗೊಳಿಸಿ 2018 ಏಪ್ರಿಲ್ 5 ರಂದು ಚೀಫ್​ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್ ಕೋರ್ಟ್​ ಆದೇಶ ಹೊರಡಿಸಿತ್ತು. ಈ ತೀರ್ಪಿನ ವಿರುದ್ಧ ರಾಜಸ್ಥಾನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನ ನಡೆಸಿದ ಜೋಧ್​ಪುರ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಮನೋಜ್​ ಗಾರ್ಗ್, ಈಗ ಈ ಐವರಿಗೂ ಮತ್ತೆ ಹೊಸದಾಗಿ ನೋಟಿಸ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕೃಷ್ಣಮೃಗ ಬೇಟಿ ವೇಳೆ ಸೈಫ್ ಅಲಿಖಾನ್ ಜೊತೆಯಲ್ಲಿದ್ದ ದುಷ್ಯಂತ್ ಸಿಂಗ್ ಅವರಿಗೂ ನೋಟಿಸ್ ನೀಡಲಾಗಿದೆ. ಅಲ್ಲದೇ ಎಂಟು ವಾರಗಳ ಬಳಿಕ ಈ ಪ್ರಕರಣದ ವಿಚಾರಣೆಯನ್ನ ನಡೆಸುವುದಾಗಿ ನ್ಯಾಯಾಧೀಶ ಗಾರ್ಗ್ ತಿಳಿಸಿದ್ದಾರೆ.

1998 ಅಕ್ಟೋಬರ್​ 2 ರಂದು ಹಮ್ ಸಾಥ್ ಸಾಥ್ ಹೈಂ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಕೃಷ್ಣಮೃಗ ಬೇಟಿ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಲಾಗಿತ್ತು.

Comments are closed.