ಮುಂಬೈ: ಕಳೆದ ವರ್ಷವೇ ಹಾರ್ದಿಕ್ ಪಾಂಡ್ಯಾಗೆ ಬಾಲಿವುಡ್ ನಟಿಯೊಂದಿಗೆ ಲವ್ ಆಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಟ್ವಿಟ್ಟರ್ನಲ್ಲಿ ಈ ಬಗ್ಗೆ ಪರಿಣಿತಿ ಚೋಪ್ರಾ ಸ್ವಲ್ಪ ಸುಳಿವು ನೀಡಿದ್ದರೂ ಕೂಡ. ಅದಕ್ಕೆ ಉತ್ತರವೆಂಬಂತೆ ಹಾರ್ದಿಕ್ ಕೂಡ ಹೌದು ಎನ್ನುವ ಹಾಗೆ ನಡೆದುಕೊಂಡಿದ್ದರು. ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.
ಕೃನಾಲ್ ಪಾಂಡ್ಯ ಮದುವೆ ವೇಳೆಯೂ ಓಡಾಡಿಕೊಂಡಿದ್ದ ನಟಿ ಇದೀಗ ಮೌನ ಮುರಿದಿದ್ದಾರೆ. ಕಾಫಿ ವಿತ್ ಕರಣ್ ಶೋ ನಲ್ಲಿ ನಡೆದ ಅವಾಂತರದ ನಂತರದ ಬೆಳವಣಿಗೆ ಇದು ಎಂದು ಭಾವಿಸಿದರೆ ಏನು ಮಾಡಲು ಸಾಧ್ಯವಿಲ್ಲ. ಆದರೆ ಈಗ ನಟಿ ಪಾಂಡ್ಯರಿಂದ ದೂರವಾಗಿದ್ದಾರೆ.
ಇದು ತುಂಬಾ ಹಳೆಯ ಮತ್ತು ಮುಗಿದು ಹೋದ ಕತೆ. ಹಾರ್ದಿಕ್ ಅವರೊಂದಿಗೆ ನಾನು ಓಡಾಡುತ್ತಿಲ್ಲ. ಇನ್ನು ಮದುವೆ ಮಾತು ಬಿಡಿ. ಈ ಬಗೆಯ ಸುದ್ದಿ ಸೃಷ್ಟಿ ಮಾಡಿದವರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ.
……………..
ಪಾಂಡ್ಯ ಕಾಮೋತ್ತೇಜಕ ಹೇಳಿಕೆ
ನವದೆಹಲಿ: ಖಾಸಗಿ ಚಾನೆಲ್’ವೊಂದರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಟೀಂ ಇಂಡಿಯಾ ಕ್ರಿಕೆಟಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್’ಗೆ ವಿವರಣೆ ಕೋರಿ ಬಿಸಿಸಿಐ ಶೋಕಾಸ್ ನೋಟಿಸ್ ನೀಡಿದೆ.
ಹಿಂದಿ ನಟ ಕರಣ್ ಜೋಹರ್ ನಡೆಸಿಕೊಡುವ ’ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾರ್ದಿಕ್ ಪಾಂಡ್ಯ, ಕಾಮ ಪ್ರಚೋದಕ ಹೇಳಿಕೆ ನೀಡಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹಾರ್ದಿಕ್ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಕ್ಷಮೆಯಾಚಿಸಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಪಾಂಡ್ಯ ಹಾಗೂ ರಾಹುಲ್’ಗೆ ಸ್ಪಷ್ಟನೆ ಕೋರಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಮುಖ್ಯಸ್ಥ ವಿನೋದ್ ರಾಯ್, ಇಬ್ಬರು ಆಟಗಾರರಿಗೂ ವಿವರಣೆ ನೀಡಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಇದೀಗ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಾಡಲು ಸಜ್ಜಾಗುತ್ತಿದ್ದು, ಜನವರಿ 12ರಿಂದ ಆರಂಭವಾಗಲಿರುವ ಏಕದಿನ ಪಂದ್ಯದಲ್ಲಿ ಪಾಂಡ್ಯ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಳೆದ ವರ್ಷ ಯುಎಇನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ವೇಳೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಪಾಂಡ್ಯ ತಂಡದಿಂದ ಹೊರಬಿದ್ದಿದ್ದರು.
Comments are closed.