ಮನೋರಂಜನೆ

ಫೋಟೋಶೂಟ್ ಮಾಡಿಸಿ ಬಾಲಿವುಡ್‍ಗೆ ಹಾರಿದ ಸ್ಯಾಂಡಲ್‍ವುಡ್ ಬೆಡಗಿ ಮಾನ್ವಿತಾ!

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‍ವುಡ್ ಬೆಡಗಿ ಮಾನ್ವಿತಾ ಕಾಮತ್ ಫೋಟೋಶೂಟ್ ಮಾಡಿಸಿ ಬಾಲಿವುಡ್‍ಗೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.

‘ಟಗರು’ ಚಿತ್ರ ಮೂಲಕ ಖ್ಯಾತಿಗೊಂಡಿರುವ ಮಾನ್ವಿತಾ ಕಾಮತ್ ಈಗ ಮುಂಬೈನಲ್ಲಿದ್ದಾರೆ. ಅಲ್ಲದೇ ಇತ್ತೀಚೆಗೆ ಅವರು ಮೋಹಿತ್ ಹೋಲಾನಿ ಜೊತೆ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳ ಬಗ್ಗೆ ಈಗ ಹೆಚ್ಚು ಚರ್ಚೆ ಆಗುತ್ತಿದೆ.

ಈ ಬಗ್ಗೆ ಮಾನ್ವಿತಾ ಅವರನ್ನು ಪ್ರಶ್ನಿಸಿದ್ದಾಗ, “ನನ್ನ ಜೀವನದಲ್ಲಿ ಈಗ ಸಾಕಷ್ಟು ಒಳ್ಳೆಯ ವಿಷಯಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ನನಗೆ ಹೇಳಲಾಗಿದೆ. ಈಗ ನನಗೆ ಹಂಚಿಕೊಳ್ಳಲು ಸಾಕಷ್ಟು ವಿಷಯವಿದೆ. ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದೇನೆ” ಎಂದು ಹೇಳಿದ್ದಾರೆ.

ಮಾನ್ವಿತಾ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶಿಸುತ್ತಿರುವ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಾನ್ವಿತಾ ಜೊತೆ ನಟ ವಶಿಷ್ಟ ಸಿಂಹ ನಟಿಸಿದ್ದಾರೆ. ಕೇವಲ ಹತ್ತು ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಯುತ್ತದೆ ಎಂದು ವರದಿಯಾಗಿದೆ.

ಮಾನ್ವಿತಾ ಈಗ ‘ದಾರಿ ತಪ್ಪಿದ ಮಗ’ ಚಿತ್ರತಂಡದ ಜೊತೆ ಜನವರಿ 16ರಂದು ಸೇರುತ್ತಿದ್ದಾರೆ. ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದು, ದೀರೇನ್ ರಾಜ್‍ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರತಂಡ ಈಗ ದೀರೇನ್ ರಾಜ್‍ಕುಮಾರ್ ಪಾತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.

Comments are closed.