ಮನೋರಂಜನೆ

ನಟಿ ಮಾನ್ವಿತಾ ಟ್ವೀಟ್ ಗೆ ಅರ್ಥ ಕೇಳಿದ ನಟ ಸುದೀಪ್!

Pinterest LinkedIn Tumblr


ಬೆಂಗಳೂರು: ನಟಿ ಮಾನ್ವಿತಾ ಮಾಡಿದ್ದ ಟ್ವೀಟ್ ಅರ್ಥವೇನೆಂದು ತಿಳಯದೆ ಕನ್ಫ್ಯೂಸ್ ಆದ ಕಿಚ್ಚ ಸುದೀಪ್, ನೀವೇ ಅರ್ಥ ತಿಳಿಸಿ ಎಂದು ಕೇಳಿದ್ದಾರೆ.

ನಿರ್ದೇಶಕ ಅನೂಪ್ ಭಂಡಾರಿ ಅವರು, ” ಕಿಚ್ಚ ಸುದೀಪ್ ಅವರು ‘ಬಿಲ್ಲ ರಂಗ ಬಾಷಾ’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮತ್ತು ಕೆಆರ್ ಕೆ ಶೋರೀಲ್ ನಿರ್ಮಾಣ ಮಾಡುತ್ತಿದೆ. ಇದಕ್ಕೆ ನಿಮ್ಮ ಆಶೀರ್ವಾದ ಮತ್ತು ಬೆಂಬಲ ಬೇಕು” ಎಂದು ಟ್ವೀಟ್ ಮಾಡಿದ್ದರು.

ಅನೂಪ್ ಭಂಡಾರಿ ಮಾಡಿದ್ದ ಟ್ವೀಟ್ ಗೆ ನಟಿ ಮಾನ್ವಿತಾ ಅವರು, “ಸೂಪರ್-ಇನ್-ದಿ-ಮಾರ್ಕೆಟ್-ಇನ್-ದಿ-ಮೆಜೆಸ್ಟಿಕ್”ಎಂದು ರೀಟ್ವೀಟ್ ಮಾಡಿದ್ದರು. ಆದರೆ ಮಾನ್ವಿತಾ ಅವರು ಮಾಡಿದ್ದ ಟ್ವೀಟ್ ಸುದೀಪ್ ಅವರಿಗೆ ಅರ್ಥವಾಗಿಲ್ಲ. ಹೀಗಾಗಿ ಮಾನ್ವಿತಾ ಅವರಿಗೆ ಟ್ವೀಟ್ ಮಾಡಿ ಅದರ ಅರ್ಥವನ್ನು ತಿಳಿಸಿ ಎಂದು ಸುದೀಪ್ ಅವರು ಕೇಳಿದ್ದಾರೆ.

ನಟಿ ಮಾನ್ವಿತಾ ಅವರು ಮಾಡಿದ್ದ ಟ್ವೀಟ್ ಅನ್ನು ಅವರಿಗೆ ಟ್ಯಾಗ್ ಮಾಡಿ ನಟ ಸುದೀಪ್ ಅವರು, Oxford dictionary ಬಿಟ್ಟು ಇಂಗ್ಲೀಷ್ ನಲ್ಲಿ ದಯವಿಟ್ಟು ಇದರ ಅರ್ಥವನ್ನು ವಿವರಿಸಿ” ಎಂದು ಫನ್ನಿಯಾಗಿ ರೀಟ್ವೀಟ್ ಮಾಡಿದ್ದಾರೆ.

Comments are closed.